ಐಟಿ ವಿಚಾರಣೆ ಬಳಿಕ ಡಿಕೆಶಿ ಸ್ನೇಹದ ಬಗ್ಗೆ ದ್ವಾರಕಾನಾಥ್ ಗುರೂಜಿ ಹೇಳಿದ್ದೇನು?

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಸೇರಿದಂತೆ ಏಳು ಜನರಿಗೆ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ಇಂದು ದ್ವಾರಕಾನಾಥ್ ಗುರೂಜಿ ವಿಚಾರಣೆಗೆ ಹಾಜರಾಗಿದ್ದಾರೆ.

ವಿಚಾರಣೆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಕೇಳಿದ್ದ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ಏನೆಲ್ಲ ಪ್ರಶ್ನೆ ಕೇಳಿದ್ರು ಅಂತ ನಾನು ಹೇಳೊಲ್ಲ. ಡಿಕೆ ಶಿವಕುಮಾರ್ ಜೊತೆಯಲ್ಲಿ ನನ್ನ ವಿಚಾರಣೆ ಆಗಿಲ್ಲ. ಮತ್ತೆ ಕರೆದಾಗ ಬಂದು ವಿಚಾರಣೆ ಹಾಜರಾಗ್ತೀನಿ ಅಂತ ಹೇಳಿದ್ದೇನೆ ಅಂದ್ರು.

ಸಚಿವ ಡಿಕೆ ಶಿವಕುಮಾರ್ ನಮ್ಮ ನಡುವಿನ ಸ್ನೇಹದ ಬಗ್ಗೆ ನಾನೇನು ಹೇಳೊಲ್ಲ. ಇದ್ಯಾವುದಕ್ಕೂ ನನ್ನ ಬಳಿ ಉತ್ತರ ಇಲ್ಲವೆಂದು ಗುರೂಜಿ ಹೇಳಿದ್ರು.

ಇದನ್ನೂ ಓದಿ:  Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

Comments

Leave a Reply

Your email address will not be published. Required fields are marked *