ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಕುಳಿತ ಪ್ರಾಧ್ಯಾಪಕ

ಮೈಸೂರು: ಕಂಠಪೂರ್ತಿ ಕುಡಿದು ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ಘಟನೆ ಮೈಸೂರಿನ ಹಿನಕಲ್ ಟೆಂಟ್ ಬಳಿ ನಡೆದಿದೆ.

ರಮೇಶ್ ಕುಮಾರ್ ಟವರ್ ಏರಿದ ವ್ಯಕ್ತಿ. ಹಿನಕಲ್ ನಿವಾಸಿಯಾಗಿರುವ ರಮೇಶ್ ಪಿಹೆಚ್‍ಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೈಸೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಮೇಶ್ ಕುಮರ್ ಈ ಹಿಂದೆಯೂ ಕೂಡ ಟವರ್ ಏರಿ ಕುಳಿತಿದ್ದರು. ಟವರ್ ಮೇಲೆ ಕುಳಿತು ಮೊಬೈಲ್‍ನಲ್ಲಿ ಮಾತಾನಾಡುತ್ತಿದ್ದರು. ಆದರೆ ಈಗ ರಮೇಶ್ ಎರಡನೇ ಬಾರಿ ಟವರ್ ಏರಿ ಕುಳಿತಿದ್ದಾರೆ. ರಮೇಶ್ ಕಾಟಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹೈರಾಣರಾಗಿದ್ದಾರೆ.

ಟವರ್ ಏರಿದ ರಮೇಶ್ ಅವರನ್ನು ಕೆಳಗಿಳಿಸಲು ಪೊಲೀಸರು ಹರಸಾಹಸಪಟ್ಟರು.

Comments

Leave a Reply

Your email address will not be published. Required fields are marked *