ಕುಡಿದ ನಶೆಯಲ್ಲಿ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಸಿಬ್ಬಂದಿಗೆ ಯುವಕನಿಂದ ಥಳಿತ!

ಮೈಸೂರು: ಪಾನಮತ್ತ ಯುವಕನೊಬ್ಬ ಹೋಟೆಲ್‍ನಲ್ಲಿ ದಾಂಧಲೆ ನಡೆಸಿ ಹೋಟೆಲ್ ಸಿಬ್ಬಂದಿಗಳಿಗೆ ಥಳಿಸಿರುವ ಘಟನೆ ಮೈಸೂರಿನ ಇಲವಾಲ ಬಳಿಯ ಬೇಕ್ ಅಂಡ್ ಜಾಯ್ ಹೋಟೆಲ್‍ನಲ್ಲಿ ನಡೆದಿದೆ.

ಸಂತೋಷ್ ದಾಂಧಲೆ ನಡೆಸಿದ ಯುವಕ. ಸಂತೋಷ್ ಇಲವಾಲ ನಿವಾಸಿಯಾಗಿದ್ದು, ಕೆಲ ದಿನಗಳ ಹಿಂದೆ ಹೋಟೆಲ್ ಗೆ ಬಂದು ತಿಂಡಿ ತಿಂದು ಹಣ ಕೊಡದೆ ಹೋಗಿದ್ದ. ಮೊನ್ನೆ ಮತ್ತೆ ಸಂತೋಷ್ ಹೋಟೆಲ್ ಗೆ ಬಂದಿದ್ದಾನೆ.

ಈ ವೇಳೆ ಸಂತೋಷ್‍ಗೆ ಹೋಟೆಲ್ ಸಿಬ್ಬಂದಿ ತರಾಟೆ ತೆಗೆದುಕೊಂಡಿದ್ದಾರೆ. ಆಗ ಸುಮ್ಮನೆ ಸಂತೋಷ್ ವಾಪಾಸ್ ಹೋಗಿದ್ದಾನೆ. ಆದರೆ ರಾತ್ರಿ ಮತ್ತೆ ಹೋಟೆಲ್‍ಗೆ ಬಂದು ಗಲಾಟೆ ಮಾಡಿದ್ದಾನೆ. ಸಂತೋಷ್ ನ ಈ ದಾಂಧಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ಹೋಟೆಲ್ ಮಾಲೀಕ ಮುಶ್ರಫ್ ಇಲವಾಲ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದ್ಯ ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *