ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

– ಲಾರಿ ಬಂದರೂ ಕ್ಯಾರೆ ಮಾಡಿಲ್ಲ

ಕೋಲಾರ: ಟಿವಿಯಲ್ಲಿ ಬರುವ ಆಸೆಗೆ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಕೂತು ಕಂಠ ಪೂರ್ತಿ ಕುಡಿದು ಗಲಾಟೆ ಮಾಡಿದ ಘಟನೆ ಕೋಲಾರದ ಕೆಜಿಎಫ್ ನಗರದಲ್ಲಿ ನಡೆದಿದೆ.

ಕೆಜಿಎಫ್ ನಗರದ ಪಾರಂಡಳ್ಳಿ ರಸ್ತೆಯಲ್ಲಿ ಕುಡುಕ ಅವಾಂತರ ಮಾಡಿದ್ದಾನೆ. ಸಾವನ್ನು ಲೆಕ್ಕಿಸದೆ ರಸ್ತೆ ಮಧ್ಯೆ ಕುಳಿತು ಕುಡುಕ ಎಣ್ಣೆ ಪಾರ್ಟಿ ಮಾಡಿದ್ದಾನೆ. ರಸ್ತೆಯಲ್ಲಿಯೇ ಕುಳಿತು ಕಂಠ ಪೂರ್ತಿ ಕುಡಿದು ಎಲ್ಲರಿಗೂ ಫುಲ್ ಅವಾಜ್ ಹಾಕಿ ಗಲಾಟೆ ಮಾಡಿದ್ದಾನೆ.

ಅಷ್ಟೇ ಅಲ್ಲದೆ ಪಾದಚಾರಿಗಳಿಗೆ ಆವಾಜ್ ಹಾಕಿ ಕಿರಿಕಿರಿ ಮಾಡುತ್ತ ತೊಂದರೆ ಕೊಟ್ಟಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದ ವೇಳೆ, ವಿಡಿಯೋ ಮಾಡಿ ಟಿವಿಯಲ್ಲಿ ಬರುತ್ತಲ್ಲ ಎಂದು ಕೇಳಿರುವುದು ಸೆರೆಯಾಗಿದೆ. ಟಿವಿಯಲ್ಲಿ ಬರುವ ಆಸೆಯಿಂದ ಕುಡುಕ ಈ ರೀತಿ ಅವಾಂತರ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ರಸ್ತೆಯಲ್ಲಿ ಕೂತು ಕುಡುಕ ಮಾಡಿದ ಅವಾಂತರಕ್ಕೆ ವಾಹನ ಸವಾರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ಲಾರಿ ಬರುತ್ತಿದ್ದರೂ ಕ್ಯಾರೆ ಅನ್ನದೆ ಈ ವ್ಯಕ್ತಿ ಕುಡಿಯುತ್ತ ಕುಳಿತ್ತಿದ್ದನು. ಹೀಗಾಗಿ ಲಾರಿ ಚಾಲಕನೇ ವಾಹನವನ್ನು ರಸ್ತೆ ಬದಿಯಿಂದ ಚಲಾಯಿಸಿಕೊಂಡು ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

Comments

Leave a Reply

Your email address will not be published. Required fields are marked *