ಹೆಣ್ಣು ಮಗು ಎಂದಾಕ್ಷಣ ಯಶ್ ಕಣ್ಣಲ್ಲಿ ಆನಂದಭಾಷ್ಪ: ಡಾ.ಸ್ವರ್ಣಲತಾ

ಬೆಂಗಳೂರು: ನಟಿ ರಾಧಿಕಾ ಅವರಿಗೆ ಆಪರೇಷನ್ ಮಾಡಿ ನಿಮಗೆ ಹೆಣ್ಣು ಮಗು ಆಗಿದೆ ಎಂದು ಹೇಳಿದಾಕ್ಷಣ ಯಶ್ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು ಎಂದು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ.ಸ್ವರ್ಣಲತಾ ಅವರು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸ್ವರ್ಣಲತಾ ಅವರು, ರಾಧಿಕಾ ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದೆ. ಈಗ ತಾಯಿ ರಾಧಿಕಾ ನಾರ್ಮಲ್ ಆಗಿ ಮಾತನಾಡುತ್ತಿದ್ದು, ಎದ್ದು ನಡೆಯಬಹುದು. ತಾಯಿ ಮತ್ತು ಮಗಳು ತುಂಬಾ ಚೆನ್ನಾಗಿದ್ದಾರೆ ಎಂದು ಹೇಳಿದರು.

ಮಗು ತುಂಬಾ ಚೆನ್ನಾಗಿದ್ದು, ತುಂಬಾ ಕ್ಯೂಟ್ ಆಗಿದೆ. ಮಗುವಿನ ಅಜ್ಜಿ- ತಾತ ತುಂಬಾ ಸಂತೋಷದಿಂದ ಇದ್ದಾರೆ. ಎಲ್ಲರೂ ಈಗಾಗಲೇ ಬಂದು ನೋಡಿಕೊಂಡು ಹೋಗಿದ್ದಾರೆ. ಮಗು, ತಾಯಿ ಹೇಗಿದ್ದಾರೆ ಎಂದು ಕಾತರದಿಂದ ಸ್ನೇಹಿತರೆಲ್ಲ ಈಗ ಬಂದು ಭೇಟಿಯಾಗುತ್ತಿದ್ದಾರೆ. ಯಶ್ ಕೂಡ ಸುಸ್ತಾಗಿದ್ದಾರೆ. ಆದ್ದರಿಂದ ಆ ನಂತರ ಸಂದರ್ಶನ ಕೊಡುತ್ತಾರೆ ಎಂದು ವೈದ್ಯರು ತಿಳಿಸಿದರು.

ನಾವೆಲ್ಲಾ ಆಪರೇಷನ್ ಥಿಯೇಟರ್ ಒಳಗಡೆ ಇದ್ವಿ. ಅವರ ಮೊದಲ ರಿಯಾಕ್ಷನ್ ಹೇಳಲು ಪದಗಳ ಮೂಲಕ ಸಾಧ್ಯವಿಲ್ಲ. ಆದರೆ ತುಂಬಾ ಸಂತೋಷದಿಂದ ಇದ್ದಾರೆ. ಹೆಣ್ಣು ಮಗು ಜನಿಸಿದೆ ಎಂದು ಹೇಳಿದಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿರಬಹುದು. ಇದೊಂದು ಲವ್ಲೀ ಕ್ಷಣವಾಗಿತ್ತು ಎಂದು ಸ್ವರ್ಣಲತಾ ಅವರು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *