ಶ್ವಾನದಿಂದಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಅಮಾಯಕ ಬಲಿ

ಹಾಸನ: ಇಬ್ಬರ ನಡುವಿನ ಜಗಳಕ್ಕೆ ಅಮಾಯಕನೊಬ್ಬ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕು ಹಾಂಜಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯುವಕ ರಾಮು(45) ಕೊಲೆಯಾದ ದುರ್ದೈವಿಯಾಗಿದ್ದು, ಧರ್ಮಪುರಿ ಗ್ರಾಮದ ಮಧು ಶುಂಠಿ ಕೆಲಸಕ್ಕೆ ಶುಕ್ರವಾರ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದನು. ಅದೇ ಗ್ರಾಮದ ಮಹೇಶ್ ಎಂಬವರ ಸಾಕು ನಾಯಿ ವಾಹಕ್ಕೆ ಸಿಕ್ಕಿ ಗಾಯಗೊಂಡಿತ್ತು. ಮಾನವೀಯ ದೃಷ್ಟಿಯಿಂದ ನಾಯಿ ಚಿಕಿತ್ಸೆಗೆ ಹಣ ಕೊಟ್ಟು ಮಧು ತೆರಳಿದ್ದ. ಆದರೆ ಮಹೇಶ್ ಇಷ್ಟಕ್ಕೆ ಸುಮ್ಮನಾಗಿಲ್ಲ.

ಮಧು ಕೆಲಸ ಮುಗಿಸಿ ಸಂಜೆ ಹಿಂತಿರುಗುವಾಗ ಮಹೇಶ್ ಆತನ ವಾಹನ ಅಡ್ಡಗಟ್ಟಿ ಜಗಳ ಮಾಡಿದ್ದಾನೆ. ಈ ವೇಳೆ ಮಚ್ಚಿನಿಂದ ಮಧು ಮೇಲೆ ಹಲ್ಲೆ ಮಾಡಲು ಮಹೇಶ್ ಯತ್ನಿಸಿದ್ದಾನೆ. ಕೆಲಸಕ್ಕೆ ಹೋಗಿದ್ದ ಅದೇ ದಾರಿಯಲ್ಲಿ ಬರುತ್ತಿದ್ದ ರಾಮು ಕುತ್ತಿಗೆಗೆ ಮಚ್ಚಿನ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಏನೂ ತಪ್ಪು ಮಾಡದ ಅಮಾಯಕ ರಾಮು ಜೀವ ಕಳೆದುಕೊಂಡಿದ್ದಾನೆ.

ಘಟನೆ ಕುರಿತು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *