ದಾವಣಗೆರೆ: ಡೆಂಗ್ಯೂ ಜ್ವರಕ್ಕೆ ವೈದ್ಯರ ಮಗ ಬಲಿ

ದಾವಣಗೆರೆ: ಡೆಂಗ್ಯೂ ಜ್ವರಕ್ಕೆ ವೈದ್ಯರ ಮಗನೇ ಬಲಿಯಾದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ ನಡೆದಿದೆ.

ವೈದ್ಯ ಡಾ.ನಾಗರಾಜ್ ಅವರ ಪುತ್ರ ಮನೋಜ್ ಕುಮಾರ್(10) ಸಾವನ್ನಪ್ಪಿದ ಬಾಲಕ. ಮೂರ್ನಾಲ್ಕು ದಿನದಿಂದ ಜ್ವರದಿಂದ ಬಳಲುತಿದ್ದ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಜಿಗಳಿ ಗ್ರಾಮದಲ್ಲಿ ನೂರಾರು ಜನರಿಗೆ ಡೆಂಗ್ಯೂ ಹರಡಿದೆ. ಆರೋಗ್ಯ ಇಲಾಖೆಯಿಂದ ಕ್ರಮಕೈಗೊಂಡಿದ್ದರು ಡೆಂಗ್ಯೂ ನಿಯಂತ್ರಣಕ್ಕೆ ಬಂದಿಲ್ಲ.

Comments

Leave a Reply

Your email address will not be published. Required fields are marked *