ಚಿಕಿತ್ಸೆಗೆ ಹೋದ್ರೆ ಪಪ್ಪಿ ಕೇಳ್ತಾನೆ – ಕೈ ಮುರಿದ ವೃದ್ಧೆಗೆ ವೈದ್ಯನಿಂದ ಲೈಂಗಿಕ ಕಿರುಕುಳ

ತುಮಕೂರು: ಮೂಳೆ ಮುರಿತಕ್ಕೊಳಗಾದ 60 ವರ್ಷದ ವೃದ್ಧೆ ಜೊತೆ ವೈದ್ಯನೊಬ್ಬ ಅಶ್ಲೀಲ ಪದ ಬಳಸಿ ಅಸಭ್ಯವಾಗಿ ವರ್ತಿಸಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.

ಜಿಲ್ಲೆಯ ಪಾವಗಡ ಪಟ್ಟಣದ ಮೂಳೆ ವೈದ್ಯ ಶ್ರೀಕಾಂತ್, ವೃದ್ಧೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ. ಪಾವಗಡ ತಾಲೂಕಿನ ಗ್ರಾಮವೊಂದರ ವೃದ್ಧೆ ಕೈ ಮುರಿದುಕೊಂಡು ಶುಕ್ರವಾರದಂದು ಆಸ್ಪತ್ರೆಗೆ ಹೋದಾಗ ಕುಡಿದ ಮತ್ತಿನಲ್ಲಿದ್ದ ಶ್ರೀಕಾಂತ್ ಪಪ್ಪಿ ಕೇಳಿದನಂತೆ. ನಾನು ನಿನ್ನ ತಾಯಿಯ ಸಮಾನ ಎಂದಾಗಲೂ ಎದೆ ಕಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ನೊಂದ ವೃದ್ಧೆ ಆರೋಪಿಸಿದ್ದಾರೆ.

ಇದ್ರಿಂದ ಹೆದರಿದ ವೃದ್ಧೆ ಆಸ್ಪತ್ರೆಯಿಂದ ಓಡಿ ಹೊರ ಬಂದಿದ್ದಾರೆ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

Comments

Leave a Reply

Your email address will not be published. Required fields are marked *