ಅಪಘಾತಕ್ಕೀಡಾದ ಯುವಕನ ಕಾಲು ಕತ್ತರಿಸಿ, ತಲೆದಿಂಬು ಮಾಡಿದ ವೈದ್ಯ!

ಲಕ್ನೋ: ರಸ್ತೆ ಅಪಘಾತದಲ್ಲಿ ತುಂಡಾದ ಅರ್ಧ ಕಾಲನ್ನೇ ರೋಗಿಗೆ ದಿಂಬುವಿನಂತೆ ಬಳಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಝಾನ್ಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಉತ್ತರಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಯುವಕನ ಕಾಲನ್ನೇ ಕತ್ತರಿಸಬೇಕೆಂದು ವೈದ್ಯರು ಹೇಳಿದ್ದರು. ಕಾಲು ಕತ್ತರಿಸಿದ ವೈದ್ಯರು ಗಾಯಾಳುವಿಗೆ ತಲೆಗೆ ದಿಂಬು ಸಿಗದ ಹಿನ್ನೆಲೆಯಲ್ಲಿ ಕತ್ತರಿಸಿದ ಕಾಲನ್ನೇ ಆತನ ತಲೆದಿಂಬಾಗಿ ಬಳಸಿದ್ದಾರೆ.

ಝಾನ್ಸಿ ಜಿಲ್ಲೆಯ ಮೌರಾನಿಪುರ್ ಪ್ರದೇಶದಲ್ಲಿ ಶನಿವಾರ ಶಾಲಾ ಬಸ್ಸೊಂದು ಟ್ರ್ಯಾಕ್ಟರ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಧ್ಯಾನ್‍ಶ್ಯಾಮ್ ಕಾಲು ಭಾಗಶಃ ತುಂಡಾಗಿದೆ. ಅಲ್ಲದೇ ಬಸ್‍ನಲ್ಲಿದ್ದ 25 ವಿದ್ಯಾರ್ಥಿಗಳು ಕೂಡ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಧ್ಯಾನ್‍ಶ್ಯಾಮ್‍ರನ್ನು ಸುಮಾರು 45 ಕಿ.ಮೀ ದೂರವಿರುವ ಝಾನ್ಸಿಯ ಸರ್ಕಾರಿ ಮಹಾರಾಣಿ ಲಕ್ಷ್ಮೀಭಾಯಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಧ್ಯಾನ್‍ಶ್ಯಾಮ್‍ಗೆ ಚಿಕಿತ್ಸೆ ನೀಡಿದ ವೈದ್ಯರು ಉಳಿದ ಅರ್ಧ ಕಾಲಿನ ತುಂಡನ್ನು ಆತನ ತಲೆಯ ಕೆಳಗಡೆ ದಿಂಬುವಿನಂತೆ ಇಟ್ಟಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಯ ಈ ನಡತೆಗೆ ಧ್ಯಾನ್‍ಶ್ಯಾಮ್ ಸಂಬಂಧಿಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆ ಬಗ್ಗೆ ಅಧಿಕಾರಿಗಳು ತನಿಖೆಗೆ ಮಾಡುವಂತೆ ಆದೇಶಿದ್ದಾರೆ.

ಧ್ಯಾನ್‍ಶ್ಯಾಮ್ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಆಸ್ಪತ್ರೆ ತುರ್ತು ವೈದ್ಯಕೀಯ ಅಧಿಕಾರಿ ಡಾ. ಮಹೇಂದ್ರ ಪಾಲ್ ಸಿಂಗ್, ಹಿರಿಯ ನಿವಾಸಿ ಡಾ. ಅಲೋಕ್ ಅಗರ್ವಾಲ್ ಮತ್ತು ದಾದಿಯರು ದೀಪಾ ನಾರಂಗ್ ಮತ್ತು ಶಶಿ ಶ್ರೀವಾಸ್ತವರನ್ನು ಅಮಾನತುಗೊಳಿಸುವಂತೆ ಆದೇಶಿಸಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *