ಮಾಜಿ ಸೈನಿಕನಿಗೆ ಭೂಮಿ ನೀಡದ ಡಿಸಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲು

ರಾಯಚೂರು: ಜಿಲ್ಲೆಯ ಮಾಜಿ ಸೈನಿಕರೊಬ್ಬರಿಗೆ ಭೂಮಿ ನೀಡಬೇಕೆಂದು ಕಲಬುರಗಿ ಉಚ್ಚನ್ಯಾಯಾಲಯ ಆದೇಶ ನೀಡಿದ್ದರೂ, ನಿರ್ಲಕ್ಷ್ಯ ತೋರಿದ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗಿದೆ.

ಮಾಜಿ ಸೈನಿಕ ಪೌಲ್ ಮಿತ್ರ ಅವರಿಗೆ ಭೂಮಿ ನೀಡುವಂತೆ ಕೋರ್ಟ್ ಜಿಲ್ಲಾಧಿಕಾರಿ ಬಗಾದಿ ಗೌತಮ್‍ಗೆ ಆದೇಶ ನೀಡಿತ್ತು. ಆದರೆ ಜಿಲ್ಲೆಯಲ್ಲಿ ಜಮೀನಿನ ಕೊರತೆಯಿದ್ದು, ಪೌಲ್ ಮಿತ್ರ ಅವರಿಗೆ ಭೂಮಿ ನೀಡಲು ಸಾಧ್ಯವಿಲ್ಲ ಅಂತಾ ಬಗಾದಿ ಗೌತಮ್ ಹೇಳಿ, ನ್ಯಾಯಾಲಯದ ಆದೇಶವನ್ನ ಉಲ್ಲಂಘಿಸಿದ್ದರು.

1962 ರಲ್ಲೇ ಭಾರತೀಯ ಸೈನ್ಯದಿಂದ ಪೌಲ್ ಮಿತ್ರ (93) ನಿವೃತ್ತಿಯಾಗಿದ್ದರು. ಸುಮಾರು ವರ್ಷಗಳಿಂದ ಭೂಮಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಆಗಸ್ಟ್ 6 ರಂದು ವಿಚಾರಣೆಗೆ ಹಾಜರಾಗುವಂತೆ ಬಗಾದಿ ಗೌತಮ್ ಅವರಿಗೆ ಉಚ್ಚನ್ಯಾಯಾಲಯ ದ್ವಿಸದಸ್ಯ ಪೀಠ ತಾಕೀತು ಮಾಡಿದೆ.

Comments

Leave a Reply

Your email address will not be published. Required fields are marked *