ಲೋಕಸಭಾ ಚುನಾವಣೆ ಯಾವಾಗ ನಡೆದ್ರೂ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿ.ಕೆ ಸುರೇಶ್!

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ಸ್ಪರ್ಧಿಸಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕನಕಪುರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದ ಎದುರಿಸಲಾಗುವುದು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಿ.ಕೆ ಸುರೇಶ್ ಸ್ಪರ್ಧಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಇದರಿಂದ ಜೆಡಿಎಸ್‍ನವರಿಗೆ ಸಂಕಟವಾಗಬಹುದು ಎಂದು ಪರೋಕ್ಷವಾಗಿ ಕಾಲೆಳೆದರು.

ಲೋಕಸಭಾ ಚುನಾವಣೆಗೆ ಇನ್ನೂ ಆರು ತಿಂಗಳಲ್ಲಿ ಬಂದ್ರೂ ಅಥವಾ ಮೂರು ತಿಂಗಳಲ್ಲಿ ಬಂದ್ರೂ ಆಶ್ಚರ್ಯವಿಲ್ಲ. ಮೇ ತಿಂಗಳಲ್ಲೇ ಬರುತ್ತೆ ಎನ್ನಲಾಗುವುದಿಲ್ಲ. ಡಿಸೆಂಬರ್ ತಿಂಗಳಿಗೆ ಬಂದ್ರೂ ಬರಬಹುದು. ರಾಮನಗರ ಉಪಚುನಾವಣೆಗೆ ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನ ಕಣಕ್ಕಿಳಿಸಬಹುದು, ಇಲ್ಲವೇ ಅಭ್ಯರ್ಥಿಯನ್ನ ಕಣಕ್ಕಿಳಿಸದೆಯೇ ಇರಬಹುದು ಅಂತಾ ಹೇಳಿದರು.

Comments

Leave a Reply

Your email address will not be published. Required fields are marked *