ಮಗ ಮನೆಗೆ ಬರ್ತಿದ್ದಾನೆ, ನನಗೆ ಅದೇ ಹಬ್ಬ: ಡಿಕೆಶಿ ತಾಯಿ ಗೌರಮ್ಮ

ರಾಮನಗರ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ದೊರೆತಿರುವ ಕುರಿತು ಮೊದಲ ಪ್ರತಿಕ್ರಿಯೆ ನೀಡಿರುವ ಗೌರಮ್ಮ ಅವರು, ನನ್ನ ಮಗ ಮನೆಗೆ ಬರ್ತಿದ್ದಾನೆ, ನನಗೆ ಅದೇ ಹಬ್ಬ ಎಂದಿದ್ದಾರೆ.

ಕನಕಪುರ ತಾಲೂಕಿನ ಕೋಡಿಹಳ್ಳಿಯ ನಿವಾಸದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನನ್ನ ಮಗ ಶಿವಕುಮಾರ್ ಗೆ ಜಾಮೀನು ದೊರೆತಿರುವುದು ಸಂತಸ ತಂದಿದ್ದು, ಈ ಸಂದರ್ಭದಲ್ಲಿ ಬೇರೆ ಏನು ಹೇಳಲಾಗುತ್ತಿಲ್ಲ. ದೇವರಿಗೆ ಮಗ ಮನೆಗೆ ಬರುವಂತೆ ಬೇಡಿಕೊಂಡಿದ್ದೆ. ನನ್ನ ಮಗ ಮನೆಗೆ ಬರುತ್ತಿರುವುದೇ ಬಹುದೊಡ್ಡ ಹಬ್ಬ. ಈ ವೇಳೆ ಪಟಾಕಿ ಹೊಡಿಬೇಕಾಗಿಲ್ಲ, ಸಿಹಿ ತಿನ್ನಬೇಕಿಲ್ಲ ಎಂದರು.

ಇತ್ತ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಲಭಿಸಿರುವುದರಿಂದ ರಾಮನಗರ, ಕನಕಪುರ, ಕೆಪಿಸಿಸಿ ಕಚೇರಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಸಂಭ್ರಮಾಚರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *