ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದ್ರೂ ಆಧಾರ್ ಲಿಂಕ್ ಮಾಡಲ್ಲ: ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದರೂ, ನಾನು ಆಧಾರ್ ಸಂಖ್ಯೆಯನ್ನು ಮೊಬೈಲ್ ನಂಬರ್‍ಗೆ ಲಿಂಕ್ ಮಾಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮೊಬೈಲ್ ನಂಬರ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೆಲಿಕಾಂ ಇಲಾಖೆಯ ಈ ನಿಯಮವನ್ನು ನಾನು ಪಾಲಿಸುವುದಿಲ್ಲ, ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದರೂ ಸರಿ, ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದಿಲ್ಲ ಎಂದು ತಿಳಿಸಿದರು.

ಈ ಹಿಂದೆಯು ಸಿಎಂ ಮಮತಾ ಬ್ಯಾನರ್ಜಿ ಬ್ಯಾನರ್ಜಿ ಅವರು ಆಧಾರ್ ಅನ್ನೂ ಕಡ್ಡಾಯಗೊಳಿಸುವ ಕುರಿತು ಪ್ರಶ್ನಿಸಿ, ಇದು ವ್ಯಕ್ತಿಯ ಗೌಪ್ಯತೆಗೆ ಹಾಗೂ ಹಕ್ಕುಗಳ ವಿರುದ್ಧವಾಗಿದೆ. ಕೇಂದ್ರ ಸರ್ಕಾರವು ನಿರಂಕುಶ ಆಡಳಿತವನ್ನು ನಡೆಸುತ್ತಿದ್ದು ಆದರ ವಿರುದ್ಧ ಯಾರು ಪ್ರತಿಭಟನೆ ಮಾಡದಿದ್ದರೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಮಂದಿ ಆಧಾರ್ ಜೋಡಣೆಗೆ ಸಂಬಂಧಿಸಿದಂತೆ ಪ್ರಶ್ನಿಸಿ ಸುಪ್ರೀಂ ಕೊರ್ಟ್ ಮೆಟ್ಟಿಲು ಏರಿದ್ದು, ಆಧಾರ್‍ಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಅಕ್ಟೋಬರ್ 30ರಿಂದ ಆರಂಭವಾಗಲಿದೆ.

Comments

Leave a Reply

Your email address will not be published. Required fields are marked *