ಮುಸ್ಲಿಮರ ಪ್ರತಿಭಟನೆ ಮೂಡ್ ಬದಲಾಗಿದೆ: ಚಕ್ರವರ್ತಿ ಸೂಲಿಬೆಲೆ

ಧಾರವಾಡ: ಪ್ರಜ್ಞಾವಂತರಾದವರಿಗೆ ಲೋಕಸಭೆ ಮತ್ತು ರಾಜ್ಯಸಭೆ ಚರ್ಚೆ ನೋಡಿದರೆ ಸಿಎಎ ಬಗ್ಗೆ ಅರಿವಾಗುತ್ತಿತ್ತು. ಲೋಕಸಭೆ, ರಾಜ್ಯಸಭೆ ಟಿವಿ ವಿಶ್ಲೇಷಣೆ ಯಾರಿಗೆ ಅರ್ಥವಾಗಿಲ್ಲವೋ ಅವರಿಗೆ ತಿಳಿಸುವ ಪ್ರಯತ್ನ ಆಡಳಿತ ಪಕ್ಷ ಮಾಡಬೇಕಿತ್ತು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಈಗ ಆಡಳಿತ ಪಕ್ಷ ಅರ್ಥ ಮಾಡಿಸುವ ಕೆಲಸ ಮಾಡುತ್ತಿದೆ. ದುರದೃಷ್ಟಕರ ಸಂಗತಿ ಅಂದರೆ ವಿರೋಧ ಪಕ್ಷಗಳ ಕೂಡ ರಾಷ್ಟ್ರೀಯ ಹಿತದ ದೃಷ್ಟಿಯ ನಿರ್ಣಯ ಬೆಂಬಲಿಸಬೇಕು. ನನ್ನ ವೋಟ್ ಬ್ಯಾಂಕ್, ನಾನು ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಪ್ರಚೋದನೆ ಕೊಡುವುದು ಸರಿಯಲ್ಲ. ಆದರೆ ಅದು ಆಗಿ ಹೋಗಿದೆ. ಮುಸ್ಲಿಮರಿಗೆ ಈಗ ತಾವು ತಪ್ಪು ಮಾಡುತ್ತಿದ್ದೇವೆ ಎಂದು ಅರ್ಥ ಆಗಿದೆ ಎಂದು ಹೇಳಿದರು.

ಈಗ ಮುಸ್ಲಿಮರ ಪ್ರತಿಭಟನೆಯ ಮೂಡ್ ಬದಲಾಗಿದೆ. ಈಗ ಶಾಂತಿಯುತವಾಗಿ ಪೋಲೀಸರಿಗೆ ಹೂವು ಕೊಡುವ ಕೆಲಸ ಮಾಡಿದ್ದಾರೆ. ಪ್ರತಿಭಟನೆ ಎಲ್ಲರ ಹಕ್ಕು ಆದರೆ ಪ್ರಜಾಪ್ರಭುತ್ವ ಧಿಕ್ಕರಿಸಿ ಪ್ರತಿಭಟನೆ ಮಾಡಬಾರದು. ಮಂಗಳೂರು ಗಲಭೆ ಮೊದಲು ನ್ಯಾಯಾಂಗ ತನಿಖೆ ಆಗಬೇಕಿತ್ತು. ಮೊದಲು ಗಲಭೆಯ ತನಿಖೆಯಾಗಲಿ. ಕೇರಳದಿಂದ ಎಷ್ಟು ಜನ ಬಂದಿದ್ದರು ಎನ್ನುವುದೆಲ್ಲ ತನಿಖೆಯಾಗಬೇಕು. ಗಲಭೆ ಹಿಂದೆ ಯಾರ ಯಾರ ಕೈವಾಡ ಇದೆ ಅನ್ನೋದು ಸ್ಪಷ್ಟವಾಗಬೇಕು ಎಂದು ತಿಳಿಸಿದರು.

ಇವತ್ತು ಮುಸ್ಲಿಮರು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿರುವುದು ಸಂತಸ ತಂದಿದೆ. ಯಾವುದೇ ಸರ್ಕಾರ ಯಾವುದೇ ನಿರ್ಣಯ ತಂದಾಗ ಪ್ರಶ್ನೆ ಮಾಡುವ ಹಕ್ಕು ಇದೆ. ಆದರೆ ಅದು ಪ್ರಜಾಪ್ರಭುತ್ವದ ಮೂಲಕ ಆಗಬೇಕು. ದೇಶದ ಪರ ಇರೋರು ಮತ್ತು ದೇಶ ತುಂಡರಿಸಬೇಕು ಎನ್ನುವವರ ಮಧ್ಯೆ ಈಗ ಹೋರಾಟ ನಡೆಯುತ್ತದೆ. ಇದು ಎಡಪಂತಿ ಮತ್ತು ಬಲಪಂತಿ ಮಧ್ಯದ ಹೋರಾಟ ಅಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *