3 ಗಂಟೆ ಕಾರ್ಯಾಚರಣೆ ನಡೆಸಿ ನಾಗರ ಹಾವು ರಕ್ಷಿಸಿದ ಉರಗತಜ್ಞರು

ಧಾರವಾಡ: ಮೂರು ಗಂಟೆಗಳ ಕಾಲ ಗೋಡೆ ಮಧ್ಯದಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವನ್ನ ಬುದುಕುಳಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ದಾಸನಕೊಪ್ಪ ವೃತ್ತದ ಟ್ರಾಫಿಕ್ ಸಿಗ್ನಲ್‍ನ ಕಟ್ಟೆ ಹಾಗೂ ಕಾಂಪೌಂಡ್ ಗೊಡೆಯ ಮಧ್ಯದಲ್ಲಿ ನಾಗರ ಹಾವು ಸಿಲುಕಿ ಒದ್ದಾಡುತ್ತಿತ್ತು. ಇದನ್ನು ನೋಡಿದ ಸ್ಥಳೀಯರು ಉರಗತಜ್ಞ ನಾಸಿರ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನಾಸಿರ್ ಅವರು ಕೂಡ ಅದನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಆಗಲಿಲ್ಲ. ಇದನ್ನೂ ಓದಿ: ಸ್ಕೂಟಿ ಹತ್ತಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್

ಕೆಲ ಸ್ಥಳೀಯರು ಟ್ರಾಫಿಕ್ ಸಿಗ್ನಲ್‍ನ ಕಟ್ಟೆಯನ್ನು ಒಡೆಯಲು ಆರಂಭಿಸಿದರು. ಈ ವೇಳೆ ಹಾವಿನ ಮೇಲೆ ಮಣ್ಣು ಬಿದ್ದಿದ್ದರಿಂದ ನಾಗರ ಹಾವು ಇನ್ನಷ್ಟು ಒದ್ದಾಡಲು ಆರಂಭಿಸಿತು. ಹೀಗಾಗಿ ಅದಕ್ಕೆ ರಟ್ಟಿನ ಬಾಕ್ಸ್ ಅಡ್ಡ ಹಾಕಿ ಕಟ್ಟೆಯನ್ನು ಅರ್ಧದಷ್ಟು ಒಡೆಯಲಾಯಿತು. ಹಾವಿಗೆ ಏನೂ ಆಗದಂತೆ ಹೊರ ತಗೆಯಲು ಪ್ರಯತ್ನ ಪಡುವಾಗ ಸ್ಥಳಕ್ಕೆ ಆಗಮಿಸಿದ ಮತ್ತೊಬ್ಬ ಉತಗಜ್ಞ ಯಲ್ಲಪ್ಪ ಅವರು ಕೊನೆಗೆ ಹಾವನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ಸಫಲರಾದರು.

ಈ ಎಲ್ಲ ದೃಶ್ಯವನ್ನು ನೋಡಲು ಜನರ ದಂಡೇ ಸ್ಥಳದಲ್ಲಿ ಸೇರಿತ್ತು. ಬುದಕಿ ಉಳಿದ ಹಾವನ್ನು ಉರಗತಜ್ಞರಾದ ನಾಸಿರ್ ಹಾಗೂ ಯಲ್ಲಪ್ಪ ಅವರು ನಗರ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.

Comments

Leave a Reply

Your email address will not be published. Required fields are marked *