ಬಸ್ ನೋಡದೆ ಯೂಟರ್ನ್- ಪ್ರಾಣ ಉಳಿಸಿಕೊಳ್ಳಲು ಫುಟ್‍ಪಾತ್‍ಗೆ ಜಿಗಿದ ಬೈಕ್ ಸವಾರ

ಧಾರವಾಡ: ಬೈಕ್ ಸವಾರನೋರ್ವ ಹುಚ್ಚುತನ ಪ್ರದರ್ಶನ ಮಾಡಿ ನಂತರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಧಾರವಾಡ ಹೊರವಲಯದಲ್ಲಿ ನಡೆದಿದೆ.

ಬಿ.ಆರ್.ಟಿ.ಎಸ್ ಕಾರಿಡಾರ್ ನುಗ್ಗಿದ ಬೈಕ್ ಸವಾರ ಶರವೇಗದಲ್ಲಿ ಬಂದ ಬಸ್ಸಿಗೆ ಅಡ್ಡಬಂದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಶರವೇಗದಲ್ಲಿ ಬಸ್ ಬರುವಾಗಲೇ ನಿರ್ಬಂಧಿತ ರಸ್ತೆಗೆ ನುಗ್ಗಿದ ಬೈಕ್ ಸವಾರ, ನಂತರ ಹಿಂದೆ ಬಂದ ಬಸ್ಸನ್ನು ಗಮನಿಸದೆ ಯೂಟರ್ನ್ ಮಾಡಿದ್ದಾನೆ. ಈ ವೇಳೆ ಹಿಂದೆಯಿಂದ ಬಸ್ ಬಂದಿದೆ ಆಗ ಫುಟ್‍ಪಾತ್‍ಗೆ ಜಿಗಿದಿದ್ದಾನೆ.

ಧಾರವಾಡದ ಸಂಜೀವಿನಿ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಏಕಾಏಕಿ ಅಡ್ಡ ಬಂದ ಬೈಕ್ ನೋಡಿ ವೇಗವಾಗಿ ಬಂದ ಬಿ.ಆರ್.ಟಿ.ಎಸ್ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಅವಾಂತರ ಸೃಷ್ಟಿಸಿದ ಬೈಕ್ ಸವಾರ ಸ್ಥಳದಿಂದ ತಕ್ಷಣ ಪರಾರಿಯಾಗಿದ್ದು, ಈ ಎಲ್ಲಾ ದೃಶ್ಯ ಬಿ.ಆರ್.ಟಿ.ಎಸ್ ಬಸ್ ಕಾರಿಡಾರನ ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಂಚಾರ ಪೊಲೀಸರು ಬೈಕ್ ಸವಾರನಿಗಾಗಿ ಹುಡುಕಾಟ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *