ಕಲಾವಿದನಿಂದ ಸ್ಕೂಟಿ ಮೂಲಕ ಕೊರೊನಾ ಜಾಗೃತಿ

ಧಾರವಾಡ: ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದಲ್ಲಿ ಕಲಾವಿದನೋರ್ವ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಈತನ ಕಾರ್ಯಕ್ಕೆ ಈಗ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ವಿನೂತನ ಜಾಗೃತಿ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಇವರು ತಮ್ಮ ಸ್ಕೂಟಿಯನ್ನು ಥರ್ಮಾಕೋಲ್ ಮೂಲಕ ಕೊರೊನಾ ಜಾಗೃತಿ ವಾಹಿನಿಯನ್ನಾಗಿ ಪರಿವರ್ತಿಸಿದ್ದಾರೆ.

ಕೈ ಕುಲುವುದು ಬೇಡ, ಕೈ ಮುಗಿಯೋಣ, ಸ್ವಚ್ಛತೆಯಿಂದ ಇರೋಣ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳೋಣ ಎನ್ನುವುದನ್ನು ಜನರಿಗೆ ತಿಳಿಸಲು ಆಯಾ ಕಲಾಕೃತಿಯ ಮಾದರಿಯನ್ನೇ ಇವರು ಸ್ಕೂಟಿಗೆ ಅಳವಡಿಸಿದ್ದಾರೆ. ಮುಖ್ಯವಾಗಿ ತಲೆಗೆ ಕೊರೊನಾ ವೈರಸ್ ಆಕೃತಿಯ ಮಾದರಿಯ ಹೆಲ್ಮೆಟ್ ಹಾಕಿಕೊಂಡಿದ್ದಾರೆ. ಈ ಮೂಲಕ ಧಾರವಾಡ ನಗರದಲ್ಲಿ ಸುತ್ತಾಡುತ್ತಿರುವ ಇವರು. ಅಲ್ಲಲ್ಲಿ ಜನರಿಗೆ ಕೊರೊನಾ ಮುಂಜಾಗ್ರತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *