ಧರ್ಮಸ್ಥಳ ಶವ ಹೂತಿಟ್ಟ ಕೇಸ್ | ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಎಸ್‌ಐಟಿಯಿಂದ ಪ್ರಶ್ನೆ

ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ದೂರು ನೀಡಿದ್ದ ಅನಾಮಿಕ ವ್ಯಕ್ತಿಯ ವಿಚಾರಣೆ ಎರಡನೇ ದಿನವೂ ಮುಂದುವರೆದಿದೆ.

ಎರಡನೇ ದಿನವಾದ ಇಂದು ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಪ್ರಣವ್ ಮೊಹಾಂತಿ (Pranav Mohanty) ಅವರೇ ಸ್ವತಃ ವಿಚಾರಣೆ ನಡೆಸಿದ್ದಾರೆ. ಶನಿವಾರ ಮಂಗಳೂರಿನ (Mangaluru) ಮಲ್ಲಿಕಟ್ಟೆಯಲ್ಲಿರುವ ಐಬಿಯಲ್ಲಿರುವ ಎಸ್ ಐಟಿ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿ ಡಿಐಜಿ ಅನುಚೇತ್ ನೇತೃತ್ವದಲ್ಲಿ ಎಂಟು ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಲಾಗಿತ್ತು.

ಈವರೆಗೆ ನಡೆದ ವಿಚಾರಣೆಯ ಮಾಹಿತಿ ಪಡೆದ ಬಳಿಕ ಸಾಕಷ್ಟು ವಿಚಾರಗಳನ್ನ ಆತನಿಂದ ಕೆದಕಿರುವ ಮೊಹಾಂತಿ ಆತನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅನಾಮಿಕ ವ್ಯಕ್ತಿಯ ವೈಯಕ್ತಿಕ ವಿಚಾರ,ಆತನ ಕುಟುಂಬದ ಬಾಲಕಿಗೆ ನಡೆದಿದೆ ಎಂದು ಹೇಳಿದ್ದ ಲೈಂಗಿಕ ಕಿರುಕುಳದ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ.  ಇದನ್ನೂ ಓದಿ: ಧಾರವಾಡ‌ | ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆಯ ಪತಿ ನೇಣಿಗೆ ಶರಣು‌

ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬರುಡೆಯ ಕಾನೂನುಬಾಹಿರವಾಗಿ ಹೊರ ತೆಗೆದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಎರಡನೇ ದಿನವೂ ಎಸ್ ಐಟಿ ದೂರುದಾರನನ್ನು ಫುಲ್ ಡ್ರಿಲ್ ಮಾಡಿದ್ದು ಮುಂದೆ ಎಸ್ ಐಟಿ ನಡೆ ಏನು ಎನ್ನುವುದೇ ಕುತೂಹಲ ಹುಟ್ಟಿಸಿದೆ.

ಏನೇನು ಪ್ರಶ್ನೆಗಳನ್ನು ಕೇಳಿದ್ದಾರೆ?
ನೂರಾರು ಶವ ಹೂತು ಹಾಕಿದ್ದ ವೇಳೆ ನಿನ್ನ ಜೊತೆ ಇದ್ದವರು ಯಾರು?
ಮೃತದೇಹ ಹೂತುಹಾಕಲು ಬಲವಂತಪಡಿಸಿದ ಮೇಲ್ವಿಚಾರಕರ ಹೆಸರೇನು?
ಅವರು ಇನ್ನೂ ಜೀವಂತವಾಗಿ ಇದ್ದಾರೆ ಅನ್ನೋ ಮಾಹಿತಿ ಇದ್ಯಾ?
ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬುರುಡೆ ತಂದದ್ದು ಎಲ್ಲಿಂದ,ಆ ವೇಳೆ ನಿನ್ನ ಜೊತೆ ಯಾರಿದ್ದರು?
ತಲೆ ಬುರುಡೆ ಯಾರದ್ದು ಎನ್ನುವ ಬಗ್ಗೆ ಖಚಿತತೆ ಇದ್ಯಾ?
ನೀವು ಹೂತು ಹಾಕಿದ್ದ ಮೃತದೇಹಗಳ ಪೈಕಿ ನಿಮಗೆ ಪರಿಚಿತ ವ್ಯಕ್ತಿಗಳದ್ದು ಮೃತದೇಹ ಇತ್ತಾ?
ತಲೆಬುರುಡೆಯನ್ನು ಹೊರ ತೆಗೆಯುವ ವೇಳೆ ನೀವು ಒಬ್ಬರೇ ಇದ್ದರಾ?
ಮಣ್ಣಿನಡಿಯಲ್ಲಿದ್ದ ತಲೆ ಬುರುಡೆ ಹೊರ ತೆಗೆಯಲು ನಿಮ್ಮಿಂದ ಓರ್ವರಿಂದಲೇ ಹೇಗೆ ಸಾಧ್ಯ?
ನಿಮಗೆ ಸಹಕರಿಸಿದರು ಯಾರು,ಎಷ್ಟು ಮಂದಿ ಇದ್ದರು?
ತಲೆ ಬುರುಡೆ ತೆಗೆಯೋ ವೇಳೆ ಮೊಬೈಲ್ ವೀಡಿಯೋ ಮಾಡಿದ್ದು ಯಾರು?

ದೂರುದಾರ ಬಳಿ ಕೇವಲ ಆತನ ದೂರಿಗೆ ಸಂಬಂಧಪಟ್ಟಂತೆ ಮಾತ್ರ ಪ್ರಶ್ನೆ ಕೇಳಿದ್ದಲ್ಲ. ಬದಲಾಗಿ ವೈಯಕ್ತಿಕ ವಿಚಾರವನ್ನೂ ಆತನ ಬಳಿ ಕೇಳಿದ್ದಾರೆ. 2014ರಲ್ಲಿ ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ಕಿರುಕುಳ ಆಗಿತ್ತು. ಡಿಸೆಂಬರ್ 2014ರಲ್ಲಿ ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿ ಹೋದೆ ಎಂದು ಶನಿವಾರ ಅನಾಮಿಕ ವ್ಯಕ್ತಿ ವಿಚಾರಣೆ ವೇಳೆ ಎಸ್ ಐಟಿ ಅಧಿಕಾರಿಗಳ ಮುಂದೆ ಹೇಳಿದ್ದ. ಹೀಗಾಗಿ ಈ ಪ್ರಕರಣದ ಬಗ್ಗೆಯೂ ಡಿಜಿಪಿ ಪ್ರಣವ್ ಮೊಹಾಂತಿ ಪ್ರಶ್ನಿಸಿದ್ದಾರ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: 162 ಬಾರಿ ಫಾರಿನ್‌ ಟ್ರಿಪ್‌, 300 ಕೋಟಿ ಹಗರಣ – ನಕಲಿ ರಾಯಭಾರ ಕಚೇರಿ ರಹಸ್ಯ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

 

ಯಾವೆಲ್ಲ ಪ್ರಶ್ನೆ ಕೇಳಲಾಗಿದೆ?
2014ರಲ್ಲಿ ನೀವು ಅನುಭವಿಸಿದ್ದ ಮಾನಸಿಕ ಹಿಂಸೆ ಯಾವ ರೀತಿ ತೀವ್ರವಾಗಿತ್ತು?
ಈ ಮಾನಸಿಕ ಹಿಂಸೆ ಯಾವುದಾದರೂ ವ್ಯಕ್ತಿಯಿಂದ ನಿರ್ದಿಷ್ಟವಾಗಿ ಆಗಿತ್ತಾ? ಅವರು ಯಾರ ಸಂಪರ್ಕದಲ್ಲಿದ್ದರು?
ಲೈಂಗಿಕ ಕಿರುಕುಳವಾದ ಕುಟುಂಬದ ಬಾಲಕಿ ಅಂದ್ರೆ ನಿಮಗೆ ಸಂಬಂಧ ಏನು?
ಆ ಸಂದರ್ಭದಲ್ಲಿ ಆ ಬಾಲಕಿ ಯಾವ ವಯಸ್ಸಿನವಳಿದ್ದಳು?
ಲೈಂಗಿಕ ಕಿರುಕುಳ ಮಾಡಿದ ವ್ಯಕ್ತಿ ಯಾರು? ಅವರು ಹೇಗೆ ನಿಮ್ಮ ಕುಟುಂಬದ ಸಂಪರ್ಕಕ್ಕೆ ಬಂದರು?
ಡಿಸೆಂಬರ್ 2014ರಲ್ಲಿ ನೀವು ಯಾವ ದಿನಾಂಕ ಅಥವಾ ದಿನಗಳಲ್ಲಿ ಧರ್ಮಸ್ಥಳದಿಂದ ಹೊರಗೆ ಹೋದ್ರಿ?
ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಎಲ್ಲರು ಸೇರಿ ಹೊರ ಹೋದ್ರಾ? ಯಾರು ಯಾರು ಇದ್ದರು?
ನೀವು ತಕ್ಷಣವೇ ಆಗ ಪೋಲಿಸರನ್ನ ಯಾಕೆ ಸಂಪರ್ಕ ಮಾಡಿಲ್ಲ?
ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದೀರಿ ಅಂದ್ರೆ ನೀವು ಯಾವ ರಾಜ್ಯಕ್ಕೆ ಹೋದಿರಿ?
ತಲೆ ಮರೆಸಿಕೊಂಡು ಬದುಕಿದ ಸಮಯದಲ್ಲಿ ನಿಮ್ಮ ಕುಟುಂಬದವರು ಸುರಕ್ಷಿತವಾಗಿದ್ದಾರಾ?
ಈ ಸಮಯದಲ್ಲಿ ನಿಮ್ಮನ್ನ ಯಾರಾದರೂ ಹುಡುಕಾಟ ನಡೆಸಿದರಾ ಅಥವಾ ಬೆದರಿಕೆ ಹಾಕಿದ್ದಾರಾ
ನೀವು ಈ ಕಿರುಕುಳ ಅಥವಾ ಹಿಂಸೆ ನಡೆಸಿದ ವ್ಯಕ್ತಿಗಳನ್ನು ಗುರುತಿಸಲು ಸಹಕರಿಸುತ್ತೀರಾ?
ನೀವು ಈ ಹೇಳಿಕೆ ನೀಡುವ ಮುನ್ನ ನಿಮ್ಮ ಕುಟುಂಬದ ಇತರ ಸದಸ್ಯರ ಸಹಮತವನ್ನು ಪಡೆದುಕೊಂಡಿದ್ದೀರಾ?