300ಕ್ಕೂ ಹೆಚ್ಚು ರೌಡಿಗಳಿಗೆ ಡಿಸಿಪಿ ಇಷಾ ಪಂಥ್ ಖಡಕ್ ವಾರ್ನಿಂಗ್

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳಿಗೆ ಆಗ್ನೇಯ ವಿಭಾಗ ಡಿಸಿಪಿ ಇಷಾ ಪಂಥ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಬೆಂಗಳೂರಿನ ಸಿಎಆರ್ ಸೌತ್ ಗ್ರೌಂಡ್‍ನಲ್ಲಿ ಆಗ್ನೇಯ ವಿಭಾಗದ ರೌಡಿಗಳಿಗೆ ಪರೇಡ್ ನಡೆಸಿ ಪೊಲೀಸರು ವಾರ್ನ್ ಮಾಡಿದ್ದಾರೆ. ಮೂರು ಉಪವಿಭಾಗ ಮತ್ತು 13 ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 300ಕ್ಕೂ ಹೆಚ್ಚು ರೌಡಿಗಳನ್ನು ಪೊಲೀಸರು ಗ್ರೌಂಡ್‍ಗೆ ಕರೆಸಿ ಯಾವುದೇ ಅಹಿತರ ಘಟನೆಯಲ್ಲಿ ಭಾಗಿಯಾಗಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ರೌಡಿ ಚಟುವಟಿಕೆಯಲ್ಲಿ ಭಾಗಿಯಾದರೆ ಪರಿಣಾಮ ನೆಟ್ಟಗಿರಲ್ಲ. ಯಾವುದೇ ಕೇಸ್ ಯಾರ ಮೇಲೆಯೂ ದಾಖಲಾಗಬಾದರು. ಒಂದು ವೇಳೆ ಸಣ್ಣ-ಪುಟ್ಟ ಗಲಾಟೆ ಮಾಡಿಕೊಂಡು ಕೇಸ್ ದಾಖಲಾದರೆ ಸೀದಾ ಜೈಲಿಗೆ ಹೋಗುತ್ತೀರಿ. ನಿಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಇರಬೇಕು. ಏನಾದರೂ ಬಾಲ ಬಿಚ್ಚಿದರೆ ಗೂಂಡಾ ಆಕ್ಟ್ ಹಾಕುತ್ತೀನಿ ಎಂದು ಡಿಸಿಪಿ ಇಷಾ ಪಂಥ್ ರೌಡಿಗಳಿಗೆ ಚಳಿ ಬಿಡಿಸಿದ್ದಾರೆ.

Comments

Leave a Reply

Your email address will not be published. Required fields are marked *