ಬೆಂಗಳೂರು: ಜನ ಸತ್ತರೂ ಚಿಂತೆ ಇಲ್ಲ, ರೋಡಿಗಿಳಿದ್ರೆ ಝೀರೋ ಟ್ರಾಫಿಕ್ ದರ್ಬಾರು ಮಾಡಿ ಚರ್ಚೆಗೀಡಾಗಿದ್ದ ಉಪ ಮುಖ್ಯಮಂತ್ರಿ ಪರಮೇಶ್ವರ್, ಇದೀಗ ಸ್ವಂತ ಮನೆಯಿಂದ ಕೂಗಳತೆ ದೂರದಲ್ಲೇ ಇರೋ ಸರ್ಕಾರಿ ಬಂಗಲೆಯನ್ನು ವಾಸ್ತುಪ್ರಕಾರವಾಗಿ ಬದಾವಣೆ ಮಾಡುತ್ತಿದ್ದಾರೆ.

ಹೌದು. ಡಿಸಿಎಂ ಅವರಿಗೆ ಸದಾಶಿವನಗರದಲ್ಲಿ 25 ಕೋಟಿಯ ಮನೆ ಇದ್ರೂ ಕೂಗಳತೆಯಲ್ಲಿ ಸರ್ಕಾರಿ ಬಂಗಲೆಯಿದೆ. ಇದೀಗ ಈ ಬಂಗಲೆಗೆ ಲಕ್ಷ ಲಕ್ಷ ಸರ್ಕಾರಿ ವೆಚ್ಚದಲ್ಲಿ ವಾಸ್ತು ಪ್ರಕಾರದಂತೆ ಬದಲಾವಣೆ ಮಾಡುವ ಮೂಲಕ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬದಲಾವಣೆ ಏನು?:
ಮೂರು ರಸ್ತೆ ಕೂಡುವ ಜಾಗದಲ್ಲಿ ಮನೆ ಇರೋದ್ರಿಂದ ಎಲ್ಲವೂ ವಾಸ್ತುಪ್ರಕಾರವಾಗಿ ಚೇಂಜ್ ಮಾಡಲಾಗುತ್ತಿದೆ. ಮನೆಯಿಂದ ಹೊರಗೆ ಬಂದ್ರೆ ಕಾಣುವಂತೆ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮನೆಯ ಎಡಭಾಗದಲ್ಲಿ ಮತ್ಸ್ಯಾಕಾರ ಕಲ್ಲಿನ ಆಕೃತಿ, ಮನೆಯ ಒಳಭಾಗವನ್ನು ವಾಸ್ತುಪ್ರಕಾರವೇ ಸಿದ್ಧಪಡಿಸಿದ್ದಾರೆ.

ಚಂದ್ರಶೇಖರ ಸ್ವಾಮೀಜಿ ಸೂಚನೆಯಂತೆ ಪರಮೇಶ್ವರ್ ಅವರು ಈ ಮನೆ ಬದಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply