ಕರ್ನಾಟಕ ಚುನಾವಣೆಯ ಬೆನ್ನಲ್ಲೆ ಪಾಕ್ ಸರ್ಕಾರದಿಂದ ಟಿಪ್ಪು ಸುಲ್ತಾನ್ ಹೊಗಳಿಕೆ

ಬೆಂಗಳೂರು: ಇದೇ ಮೊದಲ ಬಾರಿಗೆ ಪಾಕಿಸ್ತಾನ ಸರ್ಕಾರ ಟಿಪ್ಪು ಸುಲ್ತಾನ್ ಹೊಗಳಿ ಟ್ವೀಟ್ ಮಾಡಿದ್ದು ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಟಿಪ್ಪು ಸುಲ್ತಾನ್ ಮೃತಪಟ್ಟ 218ನೇ ವರ್ಷಾಚರಣೆಯ ಸಂದರ್ಭದಲ್ಲಿ ಪಾಕ್ ಸರ್ಕಾರ “ಮೈಸೂರಿನ ಹುಲಿ” ಎಂದು ಬಣ್ಣಿಸಿ ಟ್ವೀಟ್ ಮಾಡಿದೆ. ಟ್ವೀಟ್ ನಲ್ಲಿ ಫೋಟೋ ಪ್ರಕಟಿಸಿ, 2 ಸಾವಿರಕ್ಕೂ ಹೆಚ್ಚು ಭಾಷೆಯಲ್ಲಿ ಟಿಪ್ಪುವಿನ ಬಗ್ಗೆ ಪುಸ್ತಕ ಬರೆಯಲಾಗಿದೆ ಬಣ್ಣಿಸಿದೆ.

ಕರ್ನಾಟಕ ಚುನಾವಣೆಗೆ 9 ದಿನ ಬಾಕಿ ಇರುವಾಗಲೇ ಪಾಕ್ ಸರ್ಕಾರದಿಂದ ಈ ಹೇಳಿಕೆ ಪ್ರಕಟವಾಗಿದ್ದು, ಸಿದ್ದರಾಮಯ್ಯನವರಿಗೆ ನೆರವಾಗಲೆಂದೇ ಈ ಟ್ವೀಟ್ ಪ್ರಕಟವಾಗಿದೆ ಎಂದು ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ಆರೋಪಿಸಿದ್ದಾರೆ.

ಕರ್ನಾಟಕ ಸರ್ಕಾರದ ಟಿಪ್ಪು ಜಯಂತಿಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಈಗ ಪಾಕ್ ಸರ್ಕಾರವೇ ಟಿಪ್ಪುವನ್ನು ಹೊಗಳುವ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ವಿಚಾರ ಚರ್ಚೆಗೆ ಬಂದಿದೆ.

 

Comments

Leave a Reply

Your email address will not be published. Required fields are marked *