ಗ್ರಹಣಕ್ಕೆ ಹೆದರಿದ ಗ್ರಾಮಸ್ಥರು – ಮಕ್ಕಳಿಗೆ ಎಕ್ಕೆ ಗಿಡದ ಬಳಿ ಪೂಜೆ ಸಲ್ಲಿಕೆ

ದಾವಣಗೆರೆ: ಕೇತುಗ್ರಸ್ತ ಸೂರ್ಯಗ್ರಹಣದ ಭಯ ಎಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಸೂರ್ಯನ ಕಿರಣ ನಮ್ಮ ಮೈಮೇಲೆ ಬಿದ್ದರೆ ದೋಷವಾಗುತ್ತಾ ಎನ್ನುವಷ್ಟರ ಮಟ್ಟಿಗೆ ಮೂಡ ನಂಬಿಕೆ ಬೇರೂರಿದೆ.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮಾಡ್ಲಗೇರಿ ತಾಂಡದ ಗ್ರಾಮಸ್ಥರು ಮನೆಯಿಂದಲೇ ಹೊರ ಬಾರದ ಸ್ಥಿತಿ ಉಂಟಾಗಿದೆ. ಮನೆಯಿಂದ ಹೊರ ಬಂದರೆ ಏನಾದರೂ ದೋಷ ಬರುತ್ತಾ ಎನ್ನುವ ಭಯದಲ್ಲಿ ಬೆಳಗ್ಗೆಯಿಂದಲೂ ಬಾಗಿಲು ಮುಚ್ವಿಕೊಂಡು ಒಳಗೆ ಕೂತಿದ್ದಾರೆ. ಮನೆಯಿಂದ ಹೊರ ಬಂದರೆ ಏನಾದ್ರು ದೋಷವಾಗುತ್ತೆ ಎನ್ನುವ ಭಯದಲ್ಲಿ ಗ್ರಾಮದ ಜನರು ಕಾಡುತ್ತಿದ್ದು ಹೊರ ಬಾರದೆ ಕೂತಿದ್ದಾರೆ.

ಹರಪ್ಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ ಸೂರ್ಯ ಗ್ರಹಣ ಹಿನ್ನೆಲೆ ಒಬ್ಬರೇ ಮಕ್ಕಳಿರುವ ಪೋಷಕರು ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿ ಗ್ರಹಣ ದೋಷ ನಿವಾರಣೆ ಆಗುವಂತೆ ಪ್ರಾರ್ಥಿಸಿದರು.

ಕೇತುಗ್ರಸ್ತ ಸೂರ್ಯಗ್ರಹಣದಲ್ಲಿ ಒಬ್ಬನೇ ಮಗನಿದ್ದವರಿಗೆ ದೋಷ ಬರುತ್ತೆ ಎನ್ನುವ ನಂಬಿಕೆ ಇದ್ದು, ದೋಷ ಪರಿಹಾರಕ್ಕೆ ಎಕ್ಕೆ ಗಿಡದ ಪೂಜೆ ಸಲ್ಲಿಸಿದರೆ ದೋಷ ನಿವಾರಣೆ ಆಗುತ್ತದೆ ಎನ್ನುವುದು ನಂಬಿಕೆ. ಆದ್ದರಿಂದ ಪಣಿಯಾಪುರದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆ ತಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.

Comments

Leave a Reply

Your email address will not be published. Required fields are marked *