ಮತ್ತೆ ಎಲ್ಲರಿಗೂ ಅಕ್ಕಿ, ಗೋಧಿ ಕೊಡುವಂತೆ ಸರ್ಕಾರದ ಆದೇಶ

ಬೆಂಗಳೂರು: ದಾಸೋಹ ಯೋಜನೆಯ ವೆಲ್ ಫೇರ್ ಸ್ಕೀಮ್ ನ ಅಡಿಯಲ್ಲಿ ಮಠ ಮಾನ್ಯಗಳಿಗೆ ಪುನಃ ಅಕ್ಕಿ ಹಾಗೂ ಗೋಧಿ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿದೆ.

ವೆಲ್ ಫೇರ್ ಸ್ಕೀಮ್ ಅಡಿಯಲ್ಲಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠ ಸೇರಿದಂತೆ ಪ್ರಮುಖ ಮಠ ಮಾನ್ಯಗಳಿಗೆ ನೀಡುತ್ತಿದ್ದ ಅಕ್ಕಿ ಹಾಗೂ ಗೋದಿಯನ್ನ ಕಳೆದ ಕೆಳವು ತಿಂಗಳ ಹಿಂದೆ ಸರ್ಕಾರ ಏಕಾಏಕಿ ಸ್ಥಗಿತಗೊಳಿಸಿತ್ತು. ಆದರೆ ಮಠ ಮಾನ್ಯಗಳಿಗೆ ನೀಡುತ್ತಿದ್ದ ದವಸ ಧಾನ್ಯ ಸ್ಥಗಿತಗೊಳಿಸಿದ್ದು ದೊಡ್ಡ ವಿವಾದವಾಗಿತ್ತು. ಸಿಎಂ ಯಡಿಯೂರಪ್ಪ ಮೊದಲಿನಂತೆ ಎಲ್ಲಾ ಮಠ ಹಾಗೂ ಸಂಘ ಸಂಸ್ಥೆಗಳಿಗೆ ಪುನಃ ಅಕ್ಕಿ ಹಾಗೂ ಗೋಧಿ ಕೊಡುವುದಾಗಿ ಹೇಳಿದ್ದರು. ಅದರಂತೆ ಫೆಬ್ರವರಿ ಮೊದಲ ವಾರದಿಂದ ಈ ಹಿಂದೆ ಕೊಡುತ್ತಿದ್ದ ಎಲ್ಲಾ ಸಂಸ್ಥೆಗಳಿಗೆ ಮಠ ಮಾನ್ಯಗಳಿಗೆ ಅಕ್ಕಿ ಹಾಗೂ ಗೋಧಿ ಮೊದಲಿನಂತೆ ನೀಡಲಾಗುತ್ತಿದೆ. ಆ ಸಂಬಂಧ ಅಧಿಕೃತ ಆದೇಶವಾಗಿದೆ.

91 ಅನುದಾನಿತ, 16 ಅನುದಾನೇತರ, 222 ಖಾಸಗಿ ಮತ್ತು 22 ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಒಟ್ಟು 351 ಸರ್ಕಾರೇತರ ಕಲ್ಯಾಣ ಸಂಸ್ಥೆಗಳಿಗೆ ಅಕ್ಕಿ ಹಾಗೂ ಗೋಧಿ ನೀಡಿಕೆ ಮೊದಲಿನಂತೆ ಯಥಾವತ್ತಾಗಿ ಮುಂದುವರಿಸಲು ಆದೇಶಿಸಲಾಗಿದೆ.

Comments

Leave a Reply

Your email address will not be published. Required fields are marked *