ರ‍್ಯಾಲಿ, ರೋಡ್ ಶೋ ಬಳಿಕ ಜೋಡೆತ್ತುಗಳಿಗೆ ರೆಸ್ಟ್

ಮಂಡ್ಯ: ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ನಟ ದರ್ಶನ್ ಮತ್ತು ಯಶ್ ಅವರು ಕಳೆದ ಕೆಲವು ದಿನಗಳಿಂದ ಅಬ್ಬರದ ಪ್ರಚಾರ ಮಾಡಿದ್ದರು. ಇದೀಗ ಪ್ರಚಾರದ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಂಗಳವಾರ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಚುನಾವಣೆಯ ಕೊನೆಯ ಬಹಿರಂಗ ಸಮಾವೇಶ ನಡೆದಿತ್ತು. ರ‍್ಯಾಲಿ ಮತ್ತು ರೋಡ್ ಶೋ ಮುಗಿದ ಬಳಿಕ ದರ್ಶನ್ ಮತ್ತು ಯಶ್ ಜೋಡೆತ್ತುಗಳು ಮಂಡ್ಯದಿಂದ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.

ಜೋಡೆತ್ತುಗಳು ಮಂಡ್ಯ ಮೂಲೆ ಮೂಲೆಯಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇಷ್ಟು ದಿನ ನಾವು ಕೆಲಸ ಮಾಡಿದ್ದೇವೆ. ಇನ್ನೂ ಮುಂದೆ ನೀವು ಕೆಲಸ ಮಾಡಿ. ಸುಮಲತಾ ಅವರಿಗೆ ಈ ಬಾರಿ ಒಂದು ಅವಕಾಶ ಮಾಡಿಕೊಂಡಿ ಎಂದು ಮಂಡ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ನಾವಿಬ್ಬರು ಅಮ್ಮನ ಅಕ್ಕ-ಪಕ್ಕ ಜೋಡೆತ್ತುಗಳ ರೀತಿ ನಿಂತು ಕೆಲಸ ಮಾಡಿದ್ದೇವೆ. ಅಮ್ಮನಿಗಾಗಿ ಮುಂದೆನೂ ಮಾಡುತ್ತೇವೆ ಎಂದು ಪರೋಕ್ಷವಾಗಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ಟಾಂಗ್ ಕೊಟ್ಟಿದ್ದರು.

ಸದ್ಯಕ್ಕೆ ನಟ ಯಶ್ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಇತ್ತ ನಟ ದರ್ಶನ್ ಕೂಡ ‘ಒಡೆಯ’ ಸಿನಿಮಾ ಮಾಡುತ್ತಿದ್ದಾರೆ. ಇಬ್ಬರು ವಿಶ್ರಾಂತಿ ಪಡೆದು ತಮ್ಮ ತಮ್ಮ ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿಕೊಳ್ಳಲಿದ್ದಾರೆ.

Comments

Leave a Reply

Your email address will not be published. Required fields are marked *