ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ನಾವು ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಕನ್ನಡ ಅಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಕೆಲವರು ಕನ್ನಡ ಕಲಿಯುತ್ತಾರೆ. ಹೊಸಬರು ಎಂದಾಕ್ಷಣ ಎಲ್ಲವೂ ಆಗುತ್ತೆ ಎಂಬ ಅರ್ಥ ಅಲ್ಲ. ಒಂದು ಹೊಸ ಪ್ರಯತ್ನ ಮಾಡಬೇಕು ಎಂದರು.

ನಮ್ಮ ಭಾಷೆಯವರನ್ನೇ ಸಿನಿಮಾದಲ್ಲಿ ಅವಕಾಶ ಕೊಟ್ಟಾಗ ಲಿಪ್ ಮೂಮೆಂಟ್ ತಿಳಿಯುತ್ತದೆ. ‘ಐರಾವತ’ ಚಿತ್ರದಲ್ಲಿ ಹೀಗೆ ಆಗಿತ್ತು. ನಟಿ ಊರ್ವಶಿ ನೋಡಲು ಚೆನ್ನಾಗಿದ್ದರು. ಆದರೆ ಅವರು ಕನ್ನಡ ಭಾಷೆ ಕಲಿಯಲಿಲ್ಲ. ಇದು ಐರಾವತ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಯಿತು. ಮುಂಬೈಯಿಂದ ಬಂದವರು ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿಯುತ್ತಾರೆ. ಆದರೆ ನಮ್ಮ ಭಾಷೆಯನ್ನು ನಿರ್ಲಕ್ಷ್ಯಿಸುತ್ತಾರೆ ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್ ಮಾಡಿದ್ದೇನೆ. ಬೇರೆ ಭಾಷೆಗಳ ಸಿನಿಮಾ ಸೆಟ್ ನೋಡಿದ್ದೇವೆ. ಅವರ ಸಿನಿಮಾ ಸೆಟ್ ನೋಡಿದಾಗ ನಮ್ಮ ಕನ್ನಡ ಸಿನಿಮಾ ಸೆಟ್ ಚೆನ್ನಾಗಿದೆ ಎಂದು ಎನಿಸುತ್ತೆ. ನಿರ್ಮಾಪಕರು ಹೊರಗಿನಿಂದ ನಟಿಯನ್ನು ಕರೆದುಕೊಂಡು ಬರುತ್ತಾರೆ ಎಂದು ಹೇಳಿದಾಗ ನಾನು ಅವರಿಗೆ ಟಾಪ್ ಹೀರೋಯಿನ್ ಕರೆದುಕೊಂಡು ಬಾ ಎಂದು ಹೇಳುತ್ತೇನೆ. ಮುಂಬೈಯಿಂದ ನಟಿಯನ್ನು ಕರೆದುಕೊಂಡು ಬರುತ್ತೇನೆ ಎಂದರೆ ನಮ್ಮವರನ್ನೇ ನಟಿಯಾಗಿ ಮಾಡು ಎಂದು ಹೇಳುತ್ತೇನೆ ಎಂದರು.

ದರ್ಶನ್ ಜೊತೆಗೆ ನಟಿ ಊರ್ವಶಿ ‘ಐರಾವತ’ ಸಿನಿಮಾದಲ್ಲಿ ನಟಿಯಾಗಿ ನಟಿಸಿದ್ದರು.

Comments

Leave a Reply

Your email address will not be published. Required fields are marked *