ಎನ್‍ಐಎ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಪುತ್ತೂರಿನ ಯುವಕ!

ಮಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೊಬ್ಬನ ಹೆಸರಿದ್ದು, ಈತನ ಪತ್ತೆಗೆ ಸಹಕರಿಸಿ ಎಂದು ಸಂಸ್ಥೆ ಟ್ವಿಟ್ಟರ್‍ನಲ್ಲಿ ಮನವಿ ಮಾಡಿಕೊಂಡಿದೆ.

ಹೌದು. ಏಳೆಂಟು ವರ್ಷಗಳಿಂದ ನಾಪತ್ತೆಯಾಗಿದ್ದ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ನಿವಾಸಿ ಅಣ್ಣಾ ಎಂದೇ ಖ್ಯಾತನಾಗಿರೋ ಜಯಪ್ರಕಾಶ್ ಹೆಸರು ಪಟ್ಟಿಯಲ್ಲಿದೆ. ಸನಾತನ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದ ಜಯಪ್ರಕಾಶ್ ಹೆಸರು ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಬಾಂಬ್ ಸ್ಫೋಟ, ಗೋವಾ ಮತ್ತು ಹೈದರಾಬಾದ್ ಮೆಕ್ಕಾಮಸೀದಿ ಸ್ಫೋಟದಲ್ಲಿ ಬಾಗಿಯಾಗಿದ್ದು ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಕೆಲ ವರ್ಷಗಳ ಹಿಂದೆ ನಾಪತ್ತೆಯಾಗಿರೋ ಅಣ್ಣಾ, ಮಾಲೆಂಗಾವ್ ಸ್ಪೋಟಕ್ಕೆ ಮುನ್ನ ಆಗಾಗ ಊರಿಗೆ ಬರುತ್ತಿದ್ದನು. ಆದ್ರೆ ತದನಂತರ ಆತ ಊರಿಗೆ ಬಂದಿಲ್ಲ ಎಂದು ಜಯಪ್ರಕಾಶ್ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಇದೀಗ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್‍ಗಳ ಪಟ್ಟಿಯಲ್ಲಿ ಜಯಪ್ರಕಾಶ್ ಹೆಸರನ್ನು ಸೇರಿಸಿ ಎನ್‍ಐಎ ಪಟ್ಟಿಯನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ. ಉಗ್ರ ಹಫೀಜ್ ಸಯೀದ್, ರಿಯಾಜ್ ಭಟ್ಕಳ್ ಸೇರಿ ನಕ್ಸಲರು, ಐಸಿಸ್ ಸೇರಿದವರು ಲಿಸ್ಟ್ ನಲ್ಲಿದ್ದಾರೆ. ನೂರಕ್ಕೂ ಮಿಕ್ಕವರ ಪಟ್ಟಿ ಮಾಡಿ ಪತ್ತೆಗಾಗಿ ಎನ್‍ಐಎ ಸಾರ್ವಜನಿಕರ ಮೊರೆ ಹೋಗಿದೆ. ಅಲ್ಲದೇ ಇವರುಗಳ ಸುಳಿವು ಸಿಕ್ಕಿದಲ್ಲಿ ಗುಪ್ತ ಮಾಹಿತಿ ನೀಡುವಂತೆ ಎನ್‍ಐಎ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *