ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ಚತುರ್ಥಿ, ಶನಿವಾರ,
ಅನುರಾಧ ನಕ್ಷತ್ರ / ಜೇಷ್ಠ ನಕ್ಷತ್ರ
ರಾಹುಕಾಲ: 09:12 ರಿಂದ 10:40
ಗುಳಿಕಕಾಲ: 06:15 ರಿಂದ 07:44
ಯಮಗಂಡಕಾಲ: 01:36 ರಿಂದ 03:04
ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಂದತ್ವ ಮನಸ್ತಾಪಗಳು ಮತ್ತು ಕಲಹಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ನಿರಾಸಕ್ತಿ.
ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರಲ್ಲಿ ಬೇಸರ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ.
ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ.
ಕಟಕ: ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಕಲಹ, ಮಹಿಳೆಯರಿಗೆ ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆತಂಕ ಮತ್ತು ಚಿಂತೆ.
ಸಿಂಹ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರೋಗ್ಯ ಸಮಸ್ಯೆ ಮತ್ತು ಮನೋರೋಗಗಳು, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ.
ಕನ್ಯಾ: ಉನ್ನತ ವಿದ್ಯಾಭ್ಯಾಸದ ಹಂಬಲ, ಮಿತ್ರರಿಂದ ನೋವು ಮತ್ತು ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ.
ತುಲಾ: ವಿದ್ಯಾರ್ಥಿಗಳಿಗೆ ಆಕಸ್ಮಿಕ ಉತ್ತಮ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಅನಿರೀಕ್ಷಿತವಾಗಿ ಅಧಿಕ ಖರ್ಚು ಮತ್ತು ನಷ್ಟ.
ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಮಂದತ್ವ ಆಲಸ್ಯ, ಅನಾರೋಗ್ಯ ಸಮಸ್ಯೆಯಿಂದ ಬೇಸರ, ಅಪಮಾನ ಅಪ ನಿಂದನೆ, ಪ್ರಯಾಣದಲ್ಲಿ ಅಡೆತಡೆ.
ಧನಸ್ಸು: ಅನಿರೀಕ್ಷಿತ ಘಟನೆಗಳಿಂದ ಮನೋವ್ಯಾಧಿ, ವಿದ್ಯಾರ್ಥಿಗಳಲ್ಲಿ ಚುರುಕುತನ ಅಧಿಕ, ದೂರ ಪ್ರದೇಶದಲ್ಲಿ ಉದ್ಯೋಗದ ಆಸೆ.
ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ರಾಜಯೋಗದ ದಿವಸ, ಆರೋಗ್ಯದಲ್ಲಿ ಏರುಪೇರು.
ಕುಂಭ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯ ಮಾಡಬೇಕೆನ್ನುವ ಹಂಬಲ, ಮಿತ್ರರಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಶತ್ರುಗಳು ಅಧಿಕ.
ಮೀನ: ಅತಿಯಾದ ಆಸೆಗೆ ಬಲಿಯಾಗುವಿರಿ, ವಿದ್ಯಾಭ್ಯಾಸಕ್ಕೆ ತೊಡಕು, ಐಷಾರಾಮಿ ಜೀವನದ ಒಲವು, ನೆರೆಹೊರೆಯವರೊಂದಿಗೆ ಕಲಹ.
