ಬಾರ್ ಓಪನ್ ಆಗ್ತಿದ್ದಂತೆ ಮುಗಿಬಿದ್ದ ಜನ – ಎಣ್ಣೆಗಾಗಿ ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು

ಬೆಂಗಳೂರು: ಚುನಾವಣೆ ನಿಮಿತ್ತ ಎರಡು ದಿನಗಳ ಕಾಲ ರಾಜ್ಯಾದ್ಯಂತ ಬಾರ್ ಗಳನ್ನು ಬಂದ್ ಮಾಡಲಾಗಿದ್ದು, ಎಣ್ಣೆ ಪ್ರಿಯರು ಎಣ್ಣೆ ಸಿಗದೆ ಪರದಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.

ಶನಿವಾರ ಮತದಾನ ಮುಗಿದು ಇಂದು ಬೆಳಿಗ್ಗೆ ಬಾರ್ ಗಳು ಓಪನ್ ಆಗುತ್ತಿದ್ದಂತೆ ಮದ್ಯಕ್ಕಾಗಿ ಜನ ಮುಗಿಬಿದ್ದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಥಳಿ ರಸ್ತೆಯಲ್ಲಿರುವ ಬಾರ್ ವೊಂದರಲ್ಲಿ ಜನ ಮದ್ಯಕ್ಕಾಗಿ ಕಿತ್ತಾಡುತ್ತಿದ್ದ ಘಟನೆ ನಡೆದಿದೆ.

ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಪಡೆಯುತ್ತಿರುವುಸು ಕಂಡು ಬಂದಿದೆ. ಇನ್ನು ಮಹಿಳೆಯರು ಕೂಡ ಎಣ್ಣೆಗಾಗಿ ಬಾರ್ ಗೆ ಎಡತಾಕಿದ್ದು, ಗಂಡಸರಿಗಿಂತ ತಾವೇನು ಕಡಿಮೆ ಎಂಬಂತೆ ಸಾಲಿನಲ್ಲಿ ನಿಂತು ಮದ್ಯ ಪಡೆದಿರುವುದು ವಿಶೇಷವಾಗಿತ್ತು.

ಇನ್ನು ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಮಾತನಾಡಿ ಇಂದು ಬಾರ್ ಮುಂದೆ ನಿಂತಿರುವ ಜನರನ್ನು ನೋಡಿದರೆ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದಾಗ ಜನ ಬ್ಯಾಂಕ್ ಮುಂದೆ ನಿಂತು ನೋಟ್ ಬದಲಾಯಿಸಲು ಜನ ಪರದಾಡುತ್ತಿದ್ದ ಕಣ್ಣ ಮುಂದೆ ಹದುಹೋಯ್ತು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *