ಮೀನುಗಾರರ ಬಲೆಗೆ ಸಿಕ್ತು ದೈತ್ಯ ಮೊಸಳೆ

ರಾಯಚೂರು: ಮೀನುಗಾರರ ಬಲೆಗೆ ಆಕಸ್ಮಿಕವಾಗಿ ಮೊಸಳೆಯೊಂದು ಸೆರೆ ಸಿಕ್ಕ ಘಟನೆ ರಾಯಚೂರು ತಾಲೂಕಿನ ಮರ್ಚೆಡ್ ಕೆರೆಯಲ್ಲಿ ನಡೆದಿದೆ.

ಮನ್ಸಲಾಪುರ ಗ್ರಾಮದ ಮೀನುಗಾರರ ಬಲೆಗೆ ಸುಮಾರು 8 ಅಡಿ ಉದ್ದದ ಮೊಸಳೆ ಸೆರೆ ಸಿಕ್ಕಿದೆ. ಇದೇ ಮೊಸಳೆ ನಾಲ್ಕು ದಿನಗಳ ಹಿಂದಷ್ಟೆ ಕೆಲವರ ಕಣ್ಣಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಆದರೆ ಕೆರೆಯಲ್ಲಿ ಮೊಸಳೆ ಇರುವ ಮಾಹಿತಿ ತಿಳಿಯದೇ ಬೆಳಗ್ಗೆ ಮನ್ಸಲಾಪುರ ಗ್ರಾಮದ ಮೀನುಗಾರರು ಮೀನುಗಾರಿಕೆ ನಡೆಸಿದ್ದ ವೇಳೆ ಮೊಸಳೆ ಬಲೆಗೆ ಬಿದ್ದಿದೆ. ಇದನ್ನು ಓದಿ: ಬಲೆಗೆ ಬಿದ್ದ ದೈತ್ಯ ರೇವ್ ಫಿಶ್ – ಮೀನುಗಾರರು ಫುಲ್ ಖುಷ್

ಮೊಸಳೆ ಕೆಲವು ದಿನಗಳ ಹಿಂದಷ್ಟೇ ಪ್ರತ್ಯಕ್ಷವಾಗಿದ್ದು, ಯಾರೋ ಕಿಡಿಗೆಡಿಗಳು ಮೊಸಳೆಯನ್ನು ಮರ್ಚೆಡ್ ಕೆರೆಯೊಳಗೆ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೀನುಗಾರರು ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *