ರಸ್ತೆಯಲ್ಲಿ ಪ್ರೀತ್ಸೆ..ಪ್ರೀತ್ಸೆ ಅಂತ ಪ್ರಾಣ ತಿಂತಿದ್ದ ಪಾಗಲ್ ಪ್ರೇಮಿ- ಒಂದು ದಿನ ಮನೆಗೆ ನುಗ್ಗಿಯೇ ಬಿಟ್ಟ!

ಬೆಂಗಳೂರು: ಪ್ರೀತ್ಸೆ.. ಪ್ರೀತ್ಸೆ.. ಅಂತ ಪ್ರಾಣ ತಿಂತಿದ್ದ ಪಾಗಲ್ ಪ್ರೇಮಿಯೊಬ್ಬ ತಡರಾತ್ರಿ ಯುವತಿ ಮನೆಗೆ ನುಗ್ಗಿ ಅನುಚಿತ ವರ್ತನೆ ತೋರಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಪಿಣ್ಯಾ ಬಳಿಯ ಶಿವಪುರದಲ್ಲಿ ಈ ಘಟನೆ ನಡೆದಿದೆ. ಒಡಿಶಾ ಮೂಲದ ಯುವತಿಯನ್ನು ಪುಣೆ ಮೂಲದ ಕೃಷ್ಣಕುಮಾರ್ ಎಂಬಾತ ಪ್ರೀತಿಸುವಂತೆ ಪೀಡಿಸುತ್ತಿದ್ದನು.

ನಡೆದಿದ್ದೇನು?: ಕೃಷ್ಣ ಕುಮಾರ್ ಕಳೆದ ಕೆಲ ದಿನಗಳಿಂದ ತನ್ನನ್ನು ಪ್ರೀತಿಸುವಂತೆ ಒಡಿಶಾ ಮೂಲದ ಯುವತಿಯ ಬೆನ್ನು ಬಿದ್ದಿದ್ದ. ಆದ್ರೆ ಈತನ ಪ್ರೀತಿಗೆ ಯುವತಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಯುವಕ ಕೃಷ್ಣಕುಮಾರ್ ತಡರಾತ್ರಿ ಯುವತಿ ಮನೆಗೆ ನುಗ್ಗಿ ಕಿರುಕುಳ ನೀಡಿದ್ದನು. ಅಲ್ಲದೇ ಚಾಕುವಿನಿಂದ ಯುವತಿಗೆ ಗಾಯಗೊಳಿಸಿದ್ದನು. ಈ ವೇಳೆ ಯುವತಿ ಕಿರುಚಿಕೊಂಡಿದ್ದು, ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇತ್ತ ಯುವತಿ ಕಿರುಚಿಕೊಳ್ಳುತ್ತಿದ್ದಂತೆಯೇ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈ ಬಗ್ಗೆ ನೊಂದ ಯುವತಿಯಿಂದ ಪೀಣ್ಯ ಠಾಣೆಗೆ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *