ಪಲ್ಟಿಯಾಗಿದ್ದ ಲಾರಿ ಎತ್ತಲು ಹೋದ ಕ್ರೇನ್ ಕೂಡ ಪಲ್ಟಿ!

ರಾಯಚೂರು: ಹಳ್ಳದ ಸೇತುವೆ ಕುಸಿದು ಪಲ್ಟಿಯಾಗಿದ್ದ ಲಾರಿ ಎತ್ತಲು ಹೋಗಿ ಕ್ರೇನ್ ಪಲ್ಟಿಯಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಬಳಿ ನಡೆದಿದೆ.

ಅಕಾಲಿಕ ಮಳೆಯ ಹಿನ್ನೆಲೆ ನ.21ರಂದು ಲಾರಿ ಪಲ್ಟಿಯಾಗಿತ್ತು. ಇಂದು ಆ ಲಾರಿಯನ್ನ ತೆರವು ಮಾಡಲು ಹೋದ ಕ್ರೇನ್ ಸಹ ಪಲ್ಟಿಯಾಗಿದೆ. ಪರಿಣಾಮ ಕ್ರೇನ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಏನು ಮಳೆ ನಿಲ್ಲಿಸೋಕೆ ಆಗುತ್ತಾ – ಈಶ್ವರಪ್ಪ ಬೇಜವಾಬ್ದಾರಿ ಹೇಳಿಕೆ

ನಿನ್ನೆ ಲಾರಿ ಪಲ್ಟಿಯಾಗಿ 350 ಚೀಲ ಭತ್ತ ನೀರು ಪಾಲಾಗಿತ್ತು. ಸತತ ಮಳೆಯಿಂದ ಹಳ್ಳದ ಸೇತುವೆ ಕುಸಿತವಾಗಿ ಲಾರಿ ಪಲ್ಟಿ ಹೊಡೆದಿತ್ತು. ಮಲ್ಲದಗುಡ್ಡ ತೋರಣದಿನ್ನಿ ರಸ್ತೆಯಲ್ಲಿ ಲಾರಿ ಕುಸಿದು ಬಿದ್ದಿತ್ತು. ಭತ್ತದ ಚೀಲಗಳನ್ನ ಬೇರೆಡೆ ಸಾಗಿಸಿ, ಲಾರಿ ಮೇಲಕ್ಕೆ ಎತ್ತುವಾಗ ಘಟನೆ ನಡೆದಿದೆ. ಲಾರಿಯ ಭಾರಕ್ಕೆ ಮೇಲೆತ್ತುವಾಗ ಆಯಾತಪ್ಪಿ ಕ್ರೇನ್ ಪಲ್ಟಿ ಹೊಡೆದಿದೆ.

Comments

Leave a Reply

Your email address will not be published. Required fields are marked *