ಕೃಷ್ಣನ ರೀತಿ ಕೊಳಲೂದಿದ್ರೆ ಹಸುಗಳು ಹೆಚ್ಚು ಹಾಲು ಕೊಡ್ತವೆ: ಬಿಜೆಪಿ ಶಾಸಕ

ಗುವಾಹಟಿ: ಕೃಷ್ಣನ ರೀತಿ ಕೊಳಲನ್ನು ನುಡಿಸಿದರೆ ಹಸುಗಳು ಹೆಚ್ಚು ಹಾಲನ್ನು ಕೊಡುತ್ತವೆ ಎಂಬ ತನ್ನ ಹೇಳಿಕೆಯನ್ನು ಅಸ್ಸಾಂ ಬಿಜೆಪಿ ಶಾಸಕ ದಿಲೀಪ್ ಕುಮಾರ್ ಪೌಲ್ ಸಮರ್ಥಿಸಿಕೊಂಡಿದ್ದಾರೆ.

ಇದು ನನ್ನ ಹೇಳಿಕೆಯಲ್ಲ. ಗುಜರಾತ್ ಮೂಲದ ಅಧ್ಯಯನ ತಂಡವೊಂದು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಈ ವೇಳೆ ಭಗವಾನ್ ಕೃಷ್ಣನ ಇಂಪಾದ ಕೊಳಲ ನಾದವನ್ನು ಆಲಿಸುತ್ತಾ ಹಸುಗಳು ಹೆಚ್ಚು ಹಾಲನ್ನು ನೀಡುತ್ತವೆ ಎಂಬುದು ವರದಿಯಲ್ಲಿ ನಿಜವಾಗಿದೆ. ಹೀಗಾಗಿ ಕೃಷ್ಣ ಸುಮ್ಮನೆ ಕಾಲಹರಣಕ್ಕೋಸ್ಕರ ಕೊಳಲು ನುಡಿಸಿಲ್ಲ ಎಂದು ಶಾಸಕ ಗುವಾಹಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶನಿವಾರ ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾಸಕರು, ಶ್ರೀಕೃಷ್ಣ ರೀತಿಯಲ್ಲಿ ನಮಗೂ ವಿಶಿಷ್ಠ ರೀತಿಯಲ್ಲಿ ಕೊಳಲು ಊದಲು ಸಾಧ್ಯವಾದರೆ ಹಸುಗಳು ನೀಡಲು ಹಾಲಿನಲ್ಲಿ ಹಲವು ಪಟ್ಟು ಹೆಚ್ಚಾಗುವುದು ಎಂದು ಆಧುನಿಕ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಪುರಾತನ ಕಾಲದಲ್ಲಿ ಕಂಡುಕೊಂಡ ಈ ತಂತ್ರವನ್ನು ಆಧುನಿಕ ಯುಗದಲ್ಲಿ ಮತ್ತೆ ನಾವು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *