ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ KSRTC ನೌಕರ

ವಿಜಯಪುರ: ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸಿದ KSRTC ನೌಕರ ಆಕಳನ್ನ ರಕ್ಷಿಸಿದ್ದಾರೆ. ವಿಜಯಪುರ ಕೆ.ಎಸ್.ಆರ್ ಟಿಸಿ ಸಿಬ್ಬಂದಿ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪ್ರಸವ ವೇದನೆಯಿಂದ ಬಳಲುತ್ತಿರುವ ಆಕಳನ್ನ ಕಂಡು ಕೆ.ಎಸ್.ಆರ್.ಟಿ.ಸಿ ಬಸ್ ಸಿಬ್ಬಂದಿ ಹೈರಾಣಾಗಿದ್ದರು. ತಕ್ಷಣವೇ ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿದ ಬಸ್ ಸಿಬ್ಬಂದಿ ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

ಬಸ್ ನಿಲ್ದಾಣಕ್ಕೆ ಪಶು ವೈದ್ಯಾಧಿಕಾರಿ ಡಾ.ಶರಣಗೌಡ ಸ್ಥಳಕ್ಕೆ ಧಾವಿಸಿ ಹಸುವನ್ನ ರಕ್ಷಿಸಿದರು. ಇವರಿಬ್ಬರ ಸಹಾಯದಿಂದ ಮುದ್ದಾದ ಕರುವಿಗೆ ಹಸು ಜನ್ಮ ನೀಡಿದೆ. ಗುಮ್ಮಟನಗರಿಯ ಕೆ.ಎಸ್.ಆರ್.ಟಿ. ಸಿ. ಸಿಬ್ಬಂದಿ  ಮಾನವೀಯತೆಯ ಕಾರ್ಯ ನೋಡಿ ಸ್ಥಳೀಯ ಶಬ್ಬಾಷ್ ಅಂತಿದ್ದಾರೆ.

Comments

Leave a Reply

Your email address will not be published. Required fields are marked *