ಸಿಎಂ ಎಚ್‍ಡಿಕೆಗೆ ಕೋರ್ಟ್ ನಿಂದ ಸಮನ್ಸ್ ಜಾರಿ!

ಬೆಂಗಳೂರು: ಬಜೆಟ್ ದಿನದಂದೇ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಗೆ ಕಂಟಕ ಎದುರಾಗಿದೆ. 2006ರ ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿ ಡಿನೋಟಿಫಿಕೇಷನ್ ಕೇಸ್ ಪ್ರಕರಣ ಸಂಬಂಧ ಸಿಎಂ ಕುಮಾರಸ್ವಾಮಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಅಲ್ಲದೆ ಬಜೆಟ್ ದಿನವಾದ ಜುಲೈ ಐದರಂದೇ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ. ಮತ್ತೊಂದೆಡೆ ಅಸಮಾಧಾನ ವಿಡಿಯೋಗಳ ಬಿಡುಗಡೆ ಬೆನ್ನಲ್ಲೇ ಸಿದ್ದರಾಮಯ್ಯಗೆ ಸಿಎಂ ಕುಮಾರಸ್ವಾಮಿ ಗುನ್ನಾ ಇಟ್ಟಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ ಮೂಲಕ ಬಿಸಿಮುಟ್ಟಿಸಿದ್ದಾರೆ. ಸಿದ್ದರಾಮಯ್ಯ ಆಪ್ತರಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಮತ್ತು ಸಿದ್ದು ಅವಧಿಯಲ್ಲಿ ಸಿಎಂ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಶಂಕರಪ್ಪರನ್ನು ವರ್ಗಾವಣೆ ಮಾಡಲಾಗಿದೆ. ಸಿಎಡಿಎ ನಿರ್ದೇಶಕರಾಗಿ ಬಿಎಸ್ ಶಂಕರಪ್ಪರನ್ನು ನೇಮಿಸಲಾಗಿದೆ. ಇದನ್ನೂ ಓದಿ: ಜುಲೈ 5ರ ರಾಜ್ಯ ಬಜೆಟ್ ದಿನ ನಾ ಬರಲ್ಲ: ಡಿಕೆಶಿ

https://www.youtube.com/watch?v=0dRcuolGcKM

Comments

Leave a Reply

Your email address will not be published. Required fields are marked *