ಶಾಸಕರ ಬೆಂಬಲಿತ ಕಾರ್ಪೋರೇಟರ್‌ಗಳ ರಾಜೀನಾಮೆ ಚರ್ಚೆ?

ಬೆಂಗಳೂರು: ಶಾಸಕರು ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಕಾರ್ಪೋರೇಟರ್ ರಾಜೀನಾಮೆ ನೀಡಲು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಶಾಸಕರಾದ ರಾಮಲಿಂಗಾರೆಡ್ಡಿ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್ ಹಾಗೂ ಮುನಿರತ್ನ ಬೆಂಬಲಿತ ಕಾರ್ಪೋರೇಟರ್ ರಾಜೀನಾಮೆ ನೀಡಲು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಶಾಸಕರ ಬೆಂಬಲದಿಂದ ಗೆದ್ದ ಕಾರ್ಪೋರೇಟರ್‌ಗಳು ನಿಷ್ಠೆ ತೋರಿಸಲು ನಿರ್ಧರಿಸಿದ್ದಾರೆ.

ಶಾಸಕರು ಸೂಚನೆ ಕೊಟ್ಟರೆ ಸುಮಾರು 12 ಕಾರ್ಪೋರೇಟರ್‌ಗಳು ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ರಾಮಲಿಂಗಾ ರೆಡ್ಡಿ ಬೆಂಬಲಿಗರಾದ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಹಾಗೂ ಚಂದ್ರಪ್ಪ, ಮುನಿರತ್ನ ಬೆಂಬಲಿಗರಾದ ಜಿ.ಕೆ ವೆಂಕಟೇಶ್ ಹಾಗೂ ವೇಲು ನಾಯರ್ ಹಾಗೂ ಎಸ್.ಟಿ ಸೋಮಶೇಖರ್ ಬೆಂಬಲಿತ ಕಾರ್ಪೋರೇಟರ್ ರಾಜಣ್ಣ ಹೀಗೆ ಹಲವು ಕಾರ್ಪೋರೇಟರ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *