ನೀರು ಕೇಳಿದ್ದಕ್ಕೆ ಬಾಯಿಗೆ ಬಂದಂತೆ ಬೈದ ಕಾರ್ಪೋರೇಟರ್ ಪತಿ!

ಬೆಂಗಳೂರು: ನೀರು ಕೊಡಿ ಎಂದು ಕೇಳಿದ್ದಕ್ಕೆ ಬೆಂಗಳೂರು ಪಾಲಿಕೆಯ ಕಾರ್ಪೋರೇಟರೊಬ್ಬರ ಪತಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಬೆಳಕಿಗೆ ಬಂದಿದೆ.

ವೆಂಕಟೇಶ್(ಪಳನಿ) ದರ್ಪ ತೋರಿದವರಾಗಿದ್ದು, ಇವರು ವಾರ್ಡ್ 6 ಕಾರ್ಪೋರೇಟರ್ ಮಮತಾ ಪತಿ. ನೀರು ಕೊಡಿ ಎಂದು ಥಣಿಸಂದ್ರ ವಾರ್ಡಿನ ನಿವಾಸಿಗಳು ಕೇಳಿದ್ದಕ್ಕೆ ವಾಯಿಗೆ ಬಂದಂತೆ ಬೈದು ನಿಂದಿಸಿದ್ದಾರೆ ಎಂದು ವಾರ್ಡ್ ಮಂದಿ ಆರೋಪಿಸಿದ್ದಾರೆ.

ಎಂಟು ತಿಂಗಳಿಂದ ನೀರಿಲ್ಲ. ಯಾರಿಗೂ ಮನಸಾಕ್ಷಿ ಇಲ್ಲ ಸರ್ ಎಂದು ಥಣಿಸಂದ್ರ ವಾರ್ಡಿನ ನಿವಾಸಿ ತನ್ನ ನೋವನ್ನು ಕಾರ್ಪೋರೇಟರ್ ಪತಿ ಬಳಿ ತೋಡಿಕೊಂಡಿದ್ದಾರೆ. ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದಕ್ಕೆ ವೆಂಕಟೇಶ್ ಕೋಪಗೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಶಾಸಕರ ಬಳಿ ಅಲ್ಲ ಅವರ ಅಪ್ಪನ ಬಳಿ ಹಾಗೂ ಸಿಎಂ ಬಳಿ ಹೋಗಿ ದೂರು ನೀಡಿ ಪರ್ವಾಗಿಲ್ಲ ಎಂದು ಹೇಳಿ ಅವಾಚ್ಯ ಪದ ಬಳಕೆ ಮಾಡಿ ಧಮ್ಕಿ ಹಾಕಿದ್ದಾರೆ. ಸದ್ಯ ವೆಂಕಟೇಶ್ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *