ನಿರ್ಗತಿಕರಿಗೆ, ಭಿಕ್ಷುಕರಿಗೆ ಉಪಹಾರ ನೀಡಿ ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್

– 200 ಮಂದಿಗೆ ಊಟ, ನೀರು ನೀಡಿದ ಇನ್ಸ್‌ಪೆಕ್ಟರ್

ಮಡಿಕೇರಿ: ರಾಜ್ಯ ಸರ್ಕಾರವು ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ ಲಾಕ್‍ಡೌನ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಉಪಹಾರ ಗೃಹಗಳು ಬಂದ್ ಆಗಿದೆ. ಆದ್ದರಿಂದ ನಿರ್ಗತಿಕರಿಗೆ, ಭಿಕ್ಷುಕರಿಗೆ ಉಪಹಾರ ನೀಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಸೋಂಕು ನಾಗರಿಕರಿಗೆ ಹರಡದಂತೆ ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಜರುಗಿಸಿದೆ. ಆದರೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಹೆಚ್ಚು ಜನರು ಕೂಲಿ ಕಾರ್ಮಿಕರು, ಭಿಕ್ಷುಕರು ಸೇರಿದಂತೆ ಹಲವಾರು ಮಂದಿ ಹೊಟೇಲ್, ಟೀ ಅಂಗಡಿಗಳು ಮತ್ತು ಕ್ಯಾಂಟೀನ್ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಒಂದೇ ದಿನಕ್ಕೆ ಎಲ್ಲವೂ ಸ್ತಬ್ಧವಾದ ಕಾರಣ ಅವರಲ್ಲಿ ಆತಂಕ ಉಂಟಾಗಿತ್ತು.

ಊಟ ಮಾಡಲು ಹೋಟೆಲ್‍ಗಳು ಇಲ್ಲದಿರುವುದನ್ನು ಮನಗಂಡ ಪಿರಿಯಾಪಟ್ಟಣ ಪೊಲೀಸರು ನಿರ್ಗತಿಕರಿಗೆ ಆಸರೆಯಾಗುವ ಮನಸ್ಸು ಮಾಡಿದ್ದಾರೆ. ಅದರಂತೆಯೇ ಒಂದು ಹೊತ್ತು ಉಪಹಾರ ನೀಡುವ ಮೂಲಕ ಮಾನವಿಯಂತೆ ಮೆರೆದಿದ್ದಾರೆ.

ಪಿರಿಯಾಪಟ್ಟಣ ಸುತ್ತಮುತ್ತ ಭೀಕ್ಷಕರು ಊಟವಿಲ್ಲದೆ ಪರದಾಟ ಮಾಡುವುದನ್ನು ಪಿರಿಯಾಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್ ಪ್ರದೀಪ್ ನೋಡಿದ್ದಾರೆ. ನಂತರ ಪಿರಿಯಾಪಟ್ಟಣ ನಿವಾಸಿ ಎಚ್.ಡಿ.ಮೋಹನ್ ಕುಮಾರ್ ಸಹಕಾರದೊಂದಿಗೆ ಭಿಕ್ಷುಕರಿಗೆ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಊಟ ನೀರು ನೀಡಿದ್ದಾರೆ. ಸುಮಾರು 300 ಜನಕ್ಕೆ ಈ ಸೇವೆ ಮಾಡಿ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದ್ದಾರೆ.

Comments

Leave a Reply

Your email address will not be published. Required fields are marked *