ಹಾರಂಗಿ ಸೇತುವೆ ನಿರ್ಮಾಣದಿಂದ ದಶಕಗಳ ಸಮಸ್ಯೆಗೆ ಪರಿಹಾರ; 36.50 ಕೋಟಿ ವೆಚ್ಚದಲ್ಲಿ ಕಮಾನು ಬ್ರಿಡ್ಜ್ ನಿರ್ಮಾಣ

– 110 ಮೀ. ಉದ್ದದ ಕಮಾನು ಸೇತುವೆಗೆ ನೀಲನಕ್ಷೆ ಸಿದ್ಧ

ಮಡಿಕೇರಿ: ಪ್ರತಿ ಮಳೆಗಾಲ ಬಂದ್ರೆ ಸಾಕು ಕೊಡಗಿನ ಹಾರಂಗಿ ಜಲಾಶಯದಿಂದ (Harangi Dam) ನೀರು ಬಿಡುಗಡೆ ಮಾಡಿದ್ರೆ ಸಾಕು ಹತ್ತಾರು ಹಳ್ಳಿಗಳಿಗರ ಸಂಪರ್ಕ ಕಲ್ಪಿಸುವ ಕೇಳ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಹತ್ತಾರು ಕಿಲೋ ಮೀಟರ್ ಸುತ್ತಿ ಬಳಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಹಲವಾರು ವರ್ಷಗಳಿಂದ ಈ ಗ್ರಾಮದ ನೂರಾರು ಕುಟುಂಬಗಳು ಕೇಳ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಪ್ರತಿ ಸರ್ಕಾರ ಬಂದಾಗಲೂ ಮನವಿ ಮಾಡುತ್ತಿದ್ರು. ಇದೀಗಾ ಗ್ರಾಮಸ್ಥರ ಮನವಿಯನ್ನ ಆಲಿಸಿರುವ ಸರ್ಕಾರ ದಶಕಗಳ ಸಮಸ್ಯೆಗೆ ಪರಿಹಾರ ನೀಡಿದೆ.

ಹೌದು. ಕೊಡಗಿನಲ್ಲಿ ಮಳೆಗಾಲ ಬಂದ್ರೆ ಸಾಕು ನಾನಾ ಅವಾಂತರಗಳು ಕೊಡಗು ಜಿಲ್ಲೆ ಸಾಕ್ಷಿಯಾಗುತ್ತದೆ. ಅದರಲ್ಲೂ ಕೊಡಗಿನ ಏಕೈಕ ಹಾರಂಗಿ ಜಲಾಶಯದಿಂದ ಹೆಚ್ಚುವರಿಯಾಗಿ ನೀರನ್ನು ಕಾವೇರಿ ನದಿಗೆ ಹರಿಸಿದ್ರೆ ಸಾಕು ಹಾರಂಗಿ ಹಾಗೂ ಸೋಮವಾರಪೇಟೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಗ್ರಾಮೀಣ ಭಾಗದ ಜನರು ಊರಿನಿಂದ ಹೋರ ಬರಲು ಸಾಧ್ಯವಾಗದೇ ತಮ್ಮ ತಮ್ಮ ಊರುಗಳಲ್ಲೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ನೀರು ಬಿಟ್ಟರೆ ಅಣೆಕಟ್ಟು ಎದುರಿನ ಸೇತುವೆ ಮುಳುಗಡೆಗೊಂಡು ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತಿತ್ತು. ಹಾರಂಗಿ- ಸೋಮವಾರಪೇಟೆ ರಸ್ತೆ ಕಡಿತವಾಗುವ ಹಿನ್ನೆಲೆ ಈ ಭಾಗದ ಜನರ ಓಡಾಡಕ್ಕೆ ಅನಾನುಕೂಲವಾಗುತ್ತಿತ್ತು. ಇದೀಗ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ.

ಇನ್ನೂ ಹಾರಂಗಿ, ಯಡವನಾಡು, ಹುದುಗೂರು ಮತ್ತಿತರ ಗ್ರಾಮಗಳು ಹಾರಂಗಿಯಿಂದ ನೀರು ಬಿಡುಗಡೆಯಾದರೆ ಸಂಪರ್ಕ ಕಡಿತಗೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದವು. ಜಲಾಶಯದಿಂದ 14 ಸಾವಿರ ಕ್ಯುಸೆಕ್ ಪ್ರಮಾಣದ ನೀರು ಹೊರಬಿಟ್ಟರೆ ಈ ಸೇತುವೆಯ ಮೇಲೆ ಹರಿಯುತ್ತದೆ. ಅಲ್ಲದೆ, ಸೇತುವೆಯ ಎರಡೂ ಕಡೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಸಂಚಾರ ಅಪಾಯಕಾರಿ. ಇತ್ತಿಚಿನ ಕೆಲ ವರ್ಷಗಳ ಹಿಂದೆ ನೀರು ಹರಿಯುವ ಸಂದರ್ಭ ಸೇತುವೆ ದಾಟಲು ಹೋದ ಹಸುಗಳು ಕೊಚ್ಚಿ ಹೋದ ಘಟನೆ ನಡೆದಿತ್ತು. ಹೀಗಾಗಿ ನೂತನ ಸೇತುವೆ ನಿರ್ಮಿಸಲು ನೀರಾವರಿ ನಿಗಮದಿಂದ ಯೋಜನೆ ಸಿದ್ಧವಾಗಿದೆ.

ಒಟ್ನಲ್ಲಿ ಪ್ರತಿ ಮಳೆಗಾಲ ಬಂದರೆ ಸಾಕು ಹಾರಂಗಿ ಜಲಾಶಯದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ದಿಗ್ಬಂಧನಕ್ಕೆ ಒಳಗಾಗುತ್ತಿದ್ರು. ಇದೀಗಾ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದರಿಂದ ಗ್ರಾಮೀಣ ಭಾಗದ ಜನರು ಅದಷ್ಟು ಬೇಗಾ ಕಾಮಗಾರಿ ನಡೆಸಿ ನಿರ್ಭಯವಾಗಿ ಓಡಾಟ ನಡೆಸಲು ಅವಕಾಶ ಮಾಡಿಕೋಡಬೇಕು ಎಂದು ಮನವಿ ಮಾಡಿದ್ದಾರೆ.