ಪೊಲೀಸ್ ಮೇಲೆ ಹಲ್ಲೆ ಮಾಡಿ ಸಭೆಗೆ ನುಗ್ಗಿದ ‘ಕೈ’ ಮುಖಂಡ- ವಿಡಿಯೋ ನೋಡಿ

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಸನ್ನಿ ರಾಜ್‍ಪಾಲ್ ಅವರು ಪೊಲೀಸ್ ಮೇಲೆ ಹಲ್ಲೆ ಮಾಡಿ ಸಚಿವರ ಸಭೆಗೆ ನುಗ್ಗಿದ ಘಟನೆ ಇಂದೋರ್ ನಲ್ಲಿ ಇಂದು ನಡದಿದೆ.

ಮಧ್ಯಪ್ರದೇಶದ ಲೋಕೋಪಯೋಗಿ ಹಾಗೂ ಪರಿಸರ ಸಚಿವ ಸಜ್ಜನ್ ಸಿಂಗ್ ವರ್ಮಾ ಅವರು ಸಭೆ ನಡೆಸಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಸನ್ನಿ ರಾಜ್‍ಪಾಲ್ ಅವರನ್ನು ಪೊಲೀಸರು ತಡೆದು, ಸಭೆ ನಡೆದಿದೆ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಕ್ಯಾರೆ ಎನ್ನದ ಸನ್ನಿ ರಾಜ್‍ಪಾಲ್ ಹಲ್ಲೆ ಮಾಡಿ, ಸಭೆಗೆ ನುಗ್ಗಿದ್ದಾರೆ.

ಕಾಂಗ್ರೆಸ್ ಮುಖಂಡ ಸನ್ನಿ ರಾಜ್‍ಪಾಲ್ ವರ್ತನೆಯನ್ನು ಸ್ಥಳದಲ್ಲಿದ್ದ ಕೆಲವರು ಹಾಗೂ ಮಾಧ್ಯಮದವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮುಖಂಡರ ನಡೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *