ಮೂರು ರೂ. ಚಿಲ್ಲರೆಗಾಗಿ ಕಂಡಕ್ಟರ್, ಡ್ರೈವರ್‌ನಿಂದ ಪ್ರಯಾಣಿಕನ ಮೇಲೆ ಹಲ್ಲೆ

ಬೆಂಗಳೂರು: ಮೂರು ರೂಪಾಯಿ ಚಿಲ್ಲರೆ ನೀಡುವ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್ ಸೇರಿಕೊಂಡು ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್ ಬಳಿ ನಡೆದಿದೆ.

ಮಹಮ್ಮದ್ ಹಲ್ಲೆಗೊಳಾಗದ ಪ್ರಯಾಣಿಕ. ಮಹಮ್ಮದ್ ಮಾರತ್ತಹಳ್ಳಿ ಮತ್ತು ಐಟಿಪಿಎಲ್ ಮಾರ್ಗದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಂಡಕ್ಟರ್ ಟಿಕೆಟ್ ಕೊಟ್ಟಿದ್ದು, ಮಹಮ್ಮದ್‍ಗೆ ಮೂರು ರೂಪಾಯಿ ಚಿಲ್ಲರೆ ನೀಡಬೇಕಿತ್ತು.

ಇದೇ ವಿಚಾರಕ್ಕೆ ಮೊದಲಿಗೆ ಕಂಡಕ್ಟರ್ ಮತ್ತು ಮಹಮ್ಮದ್ ನಡುವೆ ಗಲಾಟೆ ಶುರುವಾಗಿದೆ. ನಂತರ ಇವರಿಬ್ಬರ ಗಲಾಟೆಗೆ ಡ್ರೈವರ್ ಸಹ ಭಾಗಿಯಾಗಿದ್ದು, ಇಬ್ಬರು ಸೇರಿಕೊಂಡು ಪ್ರಯಾಣಿಕ ಮಹಮ್ಮದ್‍ಗೆ ಮನಬಂದಂತೆ ಥಳಿಸಿದ್ದಾರೆ. ಸದ್ಯಕ್ಕೆ ಪ್ರಯಾಣಿಕ ಮಹಮ್ಮದ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *