ದಣಿದಿದ್ದ ನಾಗರಹಾವಿಗೆ ನೀರುಣಿಸಿದ ಉರಗ ತಜ್ಞ

ಬೆಂಗಳೂರು: ಬಿಸಿಲಿನ ಬೇಗೆಗೆ ನೀರಿಲ್ಲದೆ ಬಾಯಾರಿಕೆಯಿಂದ ದಣಿದಿದ್ದ ನಾಗರಹಾವಿಗೆ ನೀರುಣಿಸಿರುವ ಅಪರೂಪದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಹಾರೋಕ್ಯಾತನಹಳ್ಳಿ ಬಳಿ ನಡೆದಿದೆ.

ವಿಪರೀತ ಬಿಸಿಲಿನಿಂದಾಗಿ ದಣಿದು ಮಲಗಿದ್ದಲ್ಲೇ ಮಲಗಿದ್ದ ನಾಗರಹಾವಿಗೆ ಎಷ್ಟೇ ಶಬ್ಧ ಮಾಡಿದರೂ ಹಾಗೆಯೇ ಮಲಗಿತ್ತು. ಇದನ್ನು ಸ್ಥಳೀಯರು ಗಮನಿಸಿದ್ದು, ಬಳಿಕ ಉರಗ ರಕ್ಷಕ ಲೋಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಲೋಕೇಶ್ ಸ್ಥಳಕ್ಕೆ ಆಗಮಿಸಿ ಬಾಟಲ್ ಮೂಲಕ ನಾಗರಹಾವಿಗೆ ನೀರನ್ನು ಕುಡಿಸಿದ್ದಾರೆ. ಬಳಿಕ ಚೇತರಿಸಿಕೊಂಡ ನಾಗಪ್ಪ ಅತ್ತಿಂದಿತ್ತ ಓಡಾಡಿದ್ದಾನೆ. ಕೂಡಲೇ ಉರಗ ರಕ್ಷಕ ಲೋಕೇಶ್ ನಾಗರಹಾವನ್ನ ಹಿಡಿದು, ಅರಣ್ಯಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳನ್ನ ಕಂಡ ಜನತೆ ಮೂಕವಿಸ್ಮಿತರಾದರು.

Comments

Leave a Reply

Your email address will not be published. Required fields are marked *