ಮನೆಯ ಮೊದ್ಲ ಮಹಡಿಗೆ ಬಂದು ಹೆಡೆಯೆತ್ತಿದ ನಾಗರಹಾವು

ಚಿಕ್ಕಬಳ್ಳಾಪುರ: ಮೊದಲ ಮಹಡಿಯ ಮನೆಗೆ ನಾಗರಹಾವಿನ ಮರಿವೊಂದು ಬಂದು ಹೆಡೆಯೆತ್ತಿರುವ ಘಟನೆ ನಡೆದಿದೆ.

ನಗರದ ಟ್ಯಾಂಕ್ ಬಂಡ್ ರಸ್ತೆಯ ಆನಂದ್ ಎಂಬವರ ಮನೆಯ ಮೊದಲ ಮಹಡಿಗೆ ನಾಗರಹಾವೊಂದು ಬಂದಿತ್ತು. ನಂತರ ನಾಗರಹಾವು ಮೆಟ್ಟಿಲುಗಳ ಮುಖಾಂತರ ಎರಡನೇ ಮಹಡಿಯತ್ತ ಹೋಗಿದೆ.

ಮೆಟ್ಟಿಲುಗಳ ಮೇಲಿದ್ದ ಮರಿನಾಗರವನ್ನು ನೋಡಿದ ಮನೆಯವರು ಭಯಗೊಂಡು ಕೂಡಲೇ ಉರಗ ರಕ್ಷಕ ಪ್ರಥ್ವಿರಾಜ್‍ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಉರಗರಕ್ಷಕ ಮನೆಗೆ ಬರುವಷ್ಟರಲ್ಲಿ ಮನೆಯ ಮುಂಭಾಗ ಇದ್ದ ಚಪ್ಪಲಿ ಬಾಕ್ಸ್ ಕೆಳಗೆ ನಾಗರಹಾವು ಕುಳಿತಿತ್ತು.

ಮಾಹಿತಿ ತಿಳಿದು ತಕ್ಷಣ ಮನೆಗೆ ಬಂದ ಪ್ರಥ್ವಿರಾಜ್ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *