ಜೆಡಿಎಸ್ ಸೇರ್ಪಡೆಗೊಂಡಿದ್ದಕ್ಕೆ ರೈತರ ಹಾಲು ತೆಗೆದುಕೊಳ್ಳಲು ಹಿಂದೇಟು!

ತುಮಕೂರು: ಕೆಲ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಕ್ಕೆ ರೈತರ ಹಾಲು ತೆಗೆದುಕೊಳ್ಳಲು ಮಧುಗಿರಿ ತಾಲೂಕಿನ ಯಾಕಾರಹಳ್ಳಿಯ ಕೆಎಂಎಫ್ ಡೈರಿ ಹಿಂದೇಟು ಹಾಕಿದೆ.

ಕೆಲ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಕ್ಕೆ ಗುಣಮಟ್ಟವಿಲ್ಲವೆಂದು ಕೆಎಂಎಫ್‍ನ ಹಾಲು ಉತ್ಪಾದಕರ ಸಂಘ ಹಾಲು ಹಾಕಿಸಿಕೊಳ್ಳಲು ನಿರಾಕರಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಸಿಬ್ಬಂದಿ ಡೈರಿ ಬಾಗಿಲನ್ನು ತೆಗೆಯದ ಕಾರಣ ಪ್ರತಿದಿನ 400 ರಿಂದ 350 ಲೀಟರ್ ಹಾಲು ನಷ್ಟವಾಗುತ್ತಿದ್ದು, ಹಾಲು ಉತ್ಪಾದಕರ ಸಂಘದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *