ದಲಿತರಿಗೂ ದೇವರ ಪೂಜೆಗೆ ಅವಕಾಶ – ಚುನಾವಣೆ ಹೊತ್ತಲ್ಲೇ ಸಿಎಂ ಹೊಸ ದಾಳ

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಿಎಂ ಸಿದ್ದರಾಮಯ್ಯ ಮತ್ತೊಂದು ದಲಿತ ದಾಳ ಉರುಳಿಸಿದ್ದಾರೆ.

ಮುಜರಾಯಿ ಇಲಾಖೆಯ ಆಧೀನದಲ್ಲಿ ಬರುವ ಸರ್ಕಾರಿ ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕಕ್ಕೆ ಮುಂದಾಗಿದ್ದಾರೆ. ರಾಜ್ಯದ ಪ್ರಖ್ಯಾತ ದೇಗುಲಗಳಾದ ಕುಕ್ಕೆ, ಕೊಲ್ಲೂರು, ಕಟೀಲು ಸೇರಿದಂತೆ ಐದು ದೇವಸ್ಥಾನಗಳಲ್ಲಿ ಆಗಮ ಶಾಲೆ ತೆರೆಯಲಾಗುತ್ತಿದೆ.

ಅಲ್ಲಿ ದಲಿತರು ಸೇರಿದಂತೆ ಸರ್ವರಿಗೂ ವೇದ, ಮಂತ್ರಗಳ ಪಾಠ ಮಾಡಲಾಗುತ್ತದೆ. ಹೀಗೆ ತರಬೇತಿ ಪಡೆದ ಅರ್ಚಕರನ್ನು ಮುಜರಾಯಿ ದೇಗುಲಗಳಲ್ಲಿ ಪೂಜೆ ನೇಮಿಸಲಾಗುತ್ತದೆ. ಆಗಮ ಶಾಲೆ ತೆರೆಯೋ ಬಗ್ಗೆ ಈಗಾಗಲೇ ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶಿಸಿದೆ.

ಇದನ್ನೂ ಓದಿ: ಮೌಢ್ಯ ನಿಷೇಧ ಕಾಯ್ದೆಗೆ ಕ್ಯಾಬಿನೆಟ್ ಒಪ್ಪಿಗೆ: ಯಾವುದಕ್ಕೆ ನಿಷೇಧ?

ಇತ್ತೀಚೆಗಷ್ಟೇ ಮೌಢ್ಯ ನಿಷೇಧ ಜಾರಿಗೆ ತಂದಿರುವ ಸಿದ್ದರಾಮಯ್ಯ ಸರ್ಕಾರ ಈಗ ದಲಿತ ಅರ್ಚಕರ ನೇಮಕ ಮತ್ತೊಂದು ಕ್ರಾಂತಿಕಾರಿ ನಿರ್ಧಾರವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ದಲಿತರಿಗೆ ಬಾವಿ ಮುಟ್ಟಲು, ಹೆಣ ಸುಡಲು ಅವಕಾಶ ಮಾಡಿಕೊಡಿ: ತೊಗಾಡಿಯಾ

Comments

Leave a Reply

Your email address will not be published. Required fields are marked *