ಚಾಮುಂಡಿ ತಾಯಿಗೆ ಸಿಎಂ ಪತ್ನಿ ಕೊಟ್ಟ ಸೀರೆ

ಮೈಸೂರು: ಕಳೆದ ದಿನ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ನಾನು ಕೊಡುವ ಸೀರೆಯನ್ನೇ ತಾಯಿ ಚಾಮುಂಡಿಗೆ ಉಡಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಎಷ್ಟೇ ಆದರೂ ಸಿಎಂ ಪತ್ನಿ ಅಲ್ಲವೇ ಆದ್ದರಿಂದ ಅವರ ಒತ್ತಾಯಕ್ಕೆ ಮಣಿದು ಇಂದು ಉತ್ಸವ ಮೂರ್ತಿ ದೇವಿ ಚಾಮುಂಡಿಗೆ ಅವರು ನೀಡಿರುವ ಸೀರೆಯನ್ನೇ ಉಡಿಸಿ ಅಲಂಕರಿಸಲಾಗಿದೆ.

ಇಂದು ನಾಡಹಬ್ಬ ಜಂಬು ಸವಾರಿ. ಆದ್ದರಿಂದ ಚಿನ್ನದ ಅಂಬಾರಿಯೊಳಗೆ ಕೂರಿಸಲಾಗುವ ಉತ್ಸವ ಮೂರ್ತಿ ಸಿದ್ಧವಾಗಿದೆ. ಸಿಎಂ ಪತ್ನಿ ಪತಿ ಸಿದ್ದರಾಮಯ್ಯ ಅವರಿಗೆ ಒಳ್ಳೆದಾಗಲಿ ಎಂದು ಹರಕೆ ಮಾಡಿಕೊಂಡು ಸೀರೆ ನೀಡಿದ್ದಾರೆ. ಅವರು ಸೀರೆಯನ್ನೇ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ತಾಯಿ ಚಾಮುಂಡಿಗೆ ಉಡಿಸಿದ್ದಾರೆ. ಸೀರೆ ಕೆಂಪು ಪಟ್ಟಿ ಉಳ್ಳ ನೀಲಿ ಬಣ್ಣದ ರೇಷ್ಮೆ ಸೀರೆಯಾಗಿದೆ.

ಕಳೆದ 15 ವರ್ಷಗಳಿಂದ ಈ ಉತ್ಸವ ಮೂರ್ತಿಗೆ ಬೆಂಗಳೂರಿನ ಬಳೆಪೇಟೆಯ ವ್ಯಕ್ತಿ ಸೀರೆ ನೀಡುತ್ತಿದ್ದರು. ಆದರೆ ಈ ಬಾರಿ ಸಿಎಂ ಪತ್ನಿಯವರ ಒತ್ತಡಕ್ಕೆ ಹೇರಿ ಅವರು ನೀಡಿರುವ ಸೀರೆಯನ್ನೇ ಉಡಿಸಲಾಗಿದೆ.

Comments

Leave a Reply

Your email address will not be published. Required fields are marked *