ಸಿಎಂ ಭದ್ರತೆಗೆ ನಿಯೋಜನೆಗೊಂಡ ಡಿವೈಎಸ್‍ಪಿಗೆ ಹೃದಯಾಘಾತ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಗೆ ನಿಯೋಜನೆಗೊಂಡ ಡಿವೈಎಸ್ಪಿಗೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಶೇಖ್ ಹುಸೇನ್ ಮೃತಪಟ್ಟ ಡಿವೈಎಸ್ಪಿಯಾಗಿದ್ದು, ಇವರು ಇಂದು ಬೆಳಗ್ಗೆ ಹೃದಯಾಘಾತವಾಗಿ ಎನ್.ಆರ್.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಹುಸೇನ್ ಅವರು ಚಿಕ್ಕಮಗಳೂರು ಗುಪ್ತಚರ ಇಲಾಖೆ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸಿಎಂ ಎಲಿಕಾಪ್ಟರ್ ಟೆಕ್ ಆಫ್ ಆದ ಮೇಲೆ ಲೋ ಬಿಪಿ ಹಾಗೂ ಶುಗರ್ ನಿಂದ ಹೃದಯಾಘಾತವಾಗಿದೆ. ಕಳೆದ ರಾತ್ರಿ ಎನ್.ಆರ್.ಪುರದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಅವರು ಅಲ್ಲಿಂದ ಹುಬ್ಬಳ್ಳಿ ಗೆ ತೆರಳಿದ ಬಳಿಕ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *