ಸಿದ್ದರಾಮಯ್ಯನಂತಿರುವ ರಾವಣನ ಸಂಹಾರಕ್ಕೆ ಶ್ರೀರಾಮುಲು ಸದಾ ಸಿದ್ಧ: ಜನಾರ್ದನ ರೆಡ್ಡಿ

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಮೋಸಗಾರ, ಸುಳ್ಳುಗಾರ. ಸಿದ್ದರಾಮಯ್ಯನಂತಿರುವ ರಾವಣನ ಸಂಹಾರಕ್ಕೆ ರಾಮನಂತಿರುವ ಶ್ರೀರಾಮಲು ಬಂದಿದ್ದಾರೆಂದು ಮೊಣಕಾಲ್ಮೂರು ಕ್ಷೇತ್ರದ ಕೋನಾಪುರದಲ್ಲಿ ಪ್ರಚಾರದ ವೇಳೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಸಿಎಂ ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು. ನಿಮಗೆ ಚಾಮುಂಡೇಶ್ವರಿ ಅಥವಾ ಬನಶಂಕರಿ ತಾಯಿಯ ಇಬ್ಬರ ಆಶೀರ್ವಾದ ಮಾಡಲ್ಲ. ನಿಮ್ಮ ಸಂಹಾರಕ್ಕೆ ಶ್ರೀರಾಮುಲು ಬಂದಿದ್ದಾರೆ. ಬದಾಮಿ ವಿಧಾನಸಭಾ ಕ್ಷೇತ್ರದ ಜನರು ಶ್ರೀರಾಮುಲು ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಅಂತಾ ಅಂದ್ರು.

ಜನಾರ್ದನ ರೆಡ್ಡಿ 1 ಲಕ್ಷ ಕೋಟಿ ಲೂಟಿ ಮಾಡಿದ್ದಾನೆ ಅಂತಾ ಸುಳ್ಳು ಹೇಳಿ ಪ್ರಚಾರ ಮಾಡಿದ ಸಿಎಂಗೆ, ನನ್ನಿಂದ 1 ರೂಪಾಯಿಯನ್ನು ವಸೂಲಿ ಮಾಡಲು ಆಗಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೆ ಶ್ರೀರಾಮುಲು ಮತ್ತು ವಿಜಯೇಂದ್ರ ಇಬ್ಬರು ಮಕ್ಕಳಿದ್ದಂತೆ. ನನ್ನ ಸ್ನೇಹಿತನಿಗಾಗಿ ಏನು ಬೇಕಾದರು ಮಾಡಲು ನಾನು ಸಿದ್ಧ ಎಂದು ರೆಡ್ಡಿ ಅಂತಾ ಹೇಳಿದ್ರು.

Comments

Leave a Reply

Your email address will not be published. Required fields are marked *