ಯಡಿಯೂರಪ್ಪ ಕಟ್ಟಿಹಾಕಲು ದೋಸ್ತಿ ಮಾಸ್ಟರ್ ಪ್ಲಾನ್!

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪರನ್ನು ಕಟ್ಟಿ ಹಾಕುವುದಕ್ಕೆ ದೋಸ್ತಿ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು, ಇದೀಗ ಮತ್ತೆ ಬಿಎಸ್‍ವೈ ವಿರುದ್ಧ ಡೈರಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೋಸ್ತಿ ಸರ್ಕಾರ ಎಸಿಬಿ ಮೂಲಕ ತನಿಖೆ ಮಾಡಿಸಿ ಬಿಎಸ್‍ವೈಗೆ ಖೆಡ್ಡಾ ತೋಡಲು ಪ್ಲಾನ್ ಮಾಡಿಕೊಂಡಿದೆ. ಸಿಸಿಬಿಯಿಂದ ಯಡಿಯೂರಪ್ಪ ಡೈರಿ ಪ್ರಕರಣವನ್ನು ವಾಪಸ್ ಪಡೆದು, ನಂತರ ಅದನ್ನು ಎಸಿಬಿಗೆ ಕೊಡಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಡೈರಿಯ ಸಿಸಿಬಿ ತನಿಖೆಗೆ ಹೈಕೋರ್ಟ್ ತಡೆ ಇರುವುದರಿಂದ ತನಿಖೆ ಮಾಡುವುದಕ್ಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಮುಖ್ಯಮಂತ್ರಿ ಅವರು ಎಸಿಬಿಗೆ ಕೊಡುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಸಿಸಿಬಿ ತನಿಖೆಗೆ ಕೊಟ್ಟ ಆದೇಶವನ್ನು ಹಿಂಪಡೆಯುವುದು. ನಂತರ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಯಡಿಯೂರಪ್ಪ ಡೈರಿ ಪ್ರಕರಣವನ್ನು ವಹಿಸಿ ಆ ಬಳಿಕ ಎಸಿಬಿಗೆ ರವಾನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಈ ಮೂಲಕ ಸಿಎಂ ಕುಮಾರಸ್ವಾಮಿ ಮಂಡ್ಯ ಸೇಡನ್ನು ಬಿಎಸ್‍ವೈ ವಿರುದ್ಧ ತೀರಿಸಿಕೊಳ್ಳಲು ಹೊರಟ್ಟಿದ್ದಾರೆಯಾ ಎಂಬ ಪ್ರಶ್ನೆ ಮೂಡಿದೆ.

Comments

Leave a Reply

Your email address will not be published. Required fields are marked *