ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

– ನನಗೆ ಕೊಡೋ ಶಕ್ತಿಯನ್ನು ಧಾರೆಯೆರೆಯುತ್ತೇನೆ

ಬಾಗಲಕೋಟೆ: ರೈತರ ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದಾರೆ.

ನಗರದಲ್ಲಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಣೆ ವೇಳೆ ಮಾತನಾಡಿದ ಸಿಎಂ, ನನಗೆ ಇರುವುದು ಒಬ್ಬ ಮಗ. ಅವನ ಮೇಲೆ ಆಣೆ ಮಾಡ್ತೇನೆ. ನಾನು ರೈತರ ಸಾಲಮನ್ನಾ ಮಾಡ್ತೇನೆ. ನಾನು ಎಲ್ಲೂ ಹೋಗಲ್ಲ, ಸರ್ಕಾರ ಬೀಳಲ್ಲ, ನಿಮ್ಮ ಸಾಲಮನ್ನಾ ಮಾಡಿಯೇ ತೀರುತ್ತೇನೆ. ಸಾಲಮನ್ನಾ ವಿಚಾರದಲ್ಲಿ ನಿಮಗೆ ಮೋಸ ಮಾಡೋದಿಲ್ಲ ಅಂತ ಅಭಯ ಕೊಟ್ಟರು. ಅಲ್ಲದೇ ಸರ್ಕಾರ ನಡೆಸುವ ಶಕ್ತಿ ನೀವು ಕೊಟ್ಟಿದ್ದೀರಿ. ಫೆಬ್ರವರಿಯಲ್ಲಿ ಬಜೆಟ್ ಮಂಡಣೆ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ವರ್ಷದಿಂದ ನಿಮ್ಮ ಬೆಳೆಗೆ ನಿಖರವಾದ ಬೆಲೆ ಸಿಗಬೇಕು. ಮಹಾರಾಷ್ಟ್ರ ಮಾದರಿ ಮಾಡಿ ಅಂತ ಕಬ್ಬು ಬೆಳೆಗಾರರು ಹೇಳ್ತಾರೆ. ನೀವೇ ಹೋಗಿ ನೋಡಿ ಮಹಾರಾಷ್ಟ್ರಕ್ಕೆ ಏನಾಗಿದೆ ಅಂತಾ ಗೊತ್ತಾಗುತ್ತೆ. ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಅವರು ಇನ್ನು ಮೇಲೆ ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಡಬೇಡಿ ಅಂತಾ ತಿಳಿಸಿದ್ರು. ನೀವು ನಮಗೆ ಶಕ್ತಿ ಕೊಡಿ. ಅದೇ ಶಕ್ತಿಯನ್ನು ವಾಪಸ್ ಧಾರೆ ಎರೆಯುತ್ತೇನೆ ಅಂತಾ ಸಿಎಂ ಭರವಸೆ ಕೊಟ್ಟರು.

ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಾಗಲಕೋಟೆ-96, ಬದಾಮಿ-422, ಹುನಗುಂದ-274, ಜಮಖಂಡಿ-1198, ಮುಧೋಳ-450, ಬೀಳಗಿ-356 ಒಟ್ಟು 2796 ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *