ಸೌಕೂರು ದುರ್ಗಾಪರಮೇಶ್ವರಿಗೆ ಸಿಎಂ ಪೂಜೆ

ಉಡುಪಿ: ಲೋಕಸಭಾ ಚುನಾವಣಾ ಅಖಾಡದಲ್ಲಿ ಬ್ಯುಸಿಯಾಗಿರುವ ಸಿಎಂ ಕುಮಾರಸ್ವಾಮಿ ರಾಜಕೀಯದ ನಡುವೆಯೂ ದೇವರು, ದೇವಸ್ಥಾನ ಮರೆತಿಲ್ಲ. ಪ್ರಚಾರದ ನಡುವೆ ಕುಂದಾಪುರದ ಸೌಕೂರು ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಇಂದು ಕೊಪ್ಪ ಪ್ರವಾಸ ಮಾಡಲಿದ್ದಾರೆ. ಮಾರ್ಗ ಮಧ್ಯೆ ಕುಂದಾಪುರ ತಾಲೂಕಿನ ಸೌಕೂರು ದೇವಸ್ಥಾನಕ್ಕೆ ಸಿಎಂ ಭೇಟಿ ಕೊಟ್ಟಿದ್ದಾರೆ.

ರಾತ್ರಿ ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ ಬಂದ ಸಿಎಂ ಕುಮಾರಸ್ವಾಮಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಸಂದರ್ಭದಲ್ಲಿ ಪುತ್ರ ನಿಖಿಲ್, ತಂದೆ ದೇವೇಗೌಡ ಸೇರಿದಂತೆ ಕುಟುಂಬದ ಒಳಿತು ಮತ್ತು ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಿಎಂ ಜೊತೆ ವಿಧಾನಪರಿಷತ್ ಸದಸ್ಯ ಭೋಜೇಗೌಡ ಮತ್ತು ಸ್ಥಳೀಯ ಜೆಡಿಎಸ್, ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಕೆಲ ಹೊತ್ತು ದೇವಸ್ಥಾನದಲ್ಲಿದ್ದು ನಂತರ ಸಿಎಂ ಕುಮಾರಸ್ವಾಮಿ ಕೊಪ್ಪಕ್ಕೆ ತೆರಳಿದ್ದಾರೆ.

Comments

Leave a Reply

Your email address will not be published. Required fields are marked *